Advertisement

ಬಿಟ್ ಕಾಯಿನ್ ಕಂಪನಿಗೆ ಕಾಂಗ್ರೆಸ್ ನದ್ದೇ ನಟನೆ, ನಿರ್ದೇಶನ,ನಿರ್ಮಾಣ : ಆರ್.ಅಶೋಕ್

01:06 PM Nov 18, 2021 | Team Udayavani |

ಚಿಕ್ಕಮಗಳೂರು : ಬಿಟ್ ಕಾಯಿನ್ ಚುನಾವಣೆಗಾಗಿ ಕಾಂಗ್ರೆಸ್ ಮಾಡಿರುವ ನಾಟಕದ ಕಂಪನಿ. ಈ ಕಂಪನಿಗೆ ಅವರೇ ಡೈರಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಂದು ಸಚಿವ ಆರ್. ಅಶೋಕ್ ಗುರುವಾರ ವ್ಯಂಗ್ಯ ಗುರುವಾರ ವ್ಯಂಗ್ಯ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ‘ಜನ ನೋಡಲಿ ಎಂದು ಹೇಳುತ್ತಿದ್ದಾರೆ, ಆದರೆ , ಜನ ಯಾರೂ ಬರುತ್ತಿಲ್ಲ. ಪ್ರಾರಂಭ ಮಾಡಿದ್ದು ಅವರೇ, ಅಂತ್ಯ ಹಾಡಬೇಕಿರೋದು ಅವರೇ, ಹೆಸರನ್ನೂ ಅವರೇ ಹೇಳಬೇಕು’ ಎಂದರು.

‘ನಿಮಗೆ ಹೆಸರು ನೀಡಲು ಆಗುವುದಿಲ್ಲ ಅಂದ್ರೆ ನೀವು ಯಾವ ಸೀಮೆ ವಿರೋಧ ಪಕ್ಷದ ನಾಯಕರು,ಇದೆಲ್ಲಾ ಕಾಂಗ್ರೆಸ್ಸಿಗರ ನಾಟಕ, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತ ನಾಟಕ ಮಾಡ್ತಿದ್ದಾರೆ . ಅವರು ಯಾವುದೇ ಹಳ್ಳಿಗೆ ಹೋಗಿ ಹಾವು ಬಿಡಲಿ, ಹಾವು ಹಿಡಿಯಲು ನಮ್ಮ ಬಳಿ ಜನ ಇದ್ದಾರೆ. ಹಾವು ಬಿಟ್ಟ ಮೇಲೆ ಕರಿದೋ, ಬಿಳಿದೋ, ನಾಗರಹಾವೋ, ಹೆಬ್ಬಾವೋ ಹೇಳುತ್ತೇನೆ’ ಎಂದರು.

‘ಹಾವು ಬಿಡದೆ ನಾವು ಯಾವ ಹಾವೆಂದು ಹೇಗೆ ಪರೀಕ್ಷೆ ಮಾಡುವುದು? ಇದು ಕಾಂಗ್ರೆಸ್ಸಿಗರ ಸುಳ್ಳಿನ ಕಂತೆ, ಮುಂದಿನ ಚುನಾವಣೆಗೆ ತೊಂದರೆಯಾಗುತ್ತೆಂದು ಕಾಂಗ್ರೆಸ್ಸಿಗರ ಕಳ್ಳ ನಾಟಕ. ಅವರ ಬಳಿ ಹಾವು ಇದ್ದಿದ್ದರೆ ಯಾವಾಗಲೋ ಬಿಡುತ್ತಿದ್ದರು, ಖಾಲಿ ಬುಟ್ಟಿ ಇಟ್ಕೊಂಡು ಆಟ ಆಡಿಸ್ತಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next