Advertisement

ಎಕ್ಸ್‌ಪ್ರೆಸ್‌ ವೇಗಳಲ್ಲಿ ಪಕ್ಷಿಧಾಮ!

10:35 PM May 06, 2023 | Team Udayavani |

ನವದೆಹಲಿ: ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆ ಪರಿಹರಿಸಲು ಮಾಲಿನ್ಯ ಮುಕ್ತ ಹಸಿರು ಪರಿಸರಕ್ಕೆ ವಿಶ್ವಾದ್ಯಂತ ಸರ್ಕಾರಗಳು ಒತ್ತು ನೀಡುತ್ತಿರುವ ನಡುವೆಯೇ, ಭಾರತ ಸರ್ಕಾರ ಇದರ ಜತೆಯಲ್ಲೇ ಪಕ್ಷಿಗಳ ವಾಸಸ್ಥಾನ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಇದರ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ-ಎಕ್ಸ್‌ಪ್ರೆಸ್‌ ವೇಗಳಲ್ಲಿ ಪಕ್ಷಿಧಾಮಗಳ ನಿರ್ಮಾಣಕ್ಕೆ ಯೋಜಿಸಿದೆ. ದೇಶ ಸ್ವಾತಂತ್ರ್ಯ ಅಮೃತಮಹೋತ್ಸವ ಪೂರೈಸುತ್ತಿರುವ ಹಿನ್ನೆಲೆಯಲ್ಲಿ “ಅಮೃತ ಮಹೋತ್ಸವ ಬರ್ಡ್‌ ಗಾರ್ಡನ್‌’ ಹೆಸರಿನಲ್ಲಿ ಕೇಂದ್ರ ರಸ್ತೆಸಾರಿಗೆ ಸಚಿವಾಲಯ ಯೋಜನೆಗಳನ್ನು ರೂಪಿಸುತ್ತಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿ-ಎಕ್ಸ್‌ಪ್ರೆಸ್‌ ವೇಗಳ ರಸ್ತೆಗಳ ಸಮೀಪವಿರುವ ಜಾಗದಲ್ಲಿ ಗಾರ್ಡನ್‌ ರೂಪುಗೊಳ್ಳಲಿದೆ.ಯೋಜನೆಯ ಮೊದಲಭಾಗವಾಗಿ ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ ವೇ ಸಮೀಪದಲ್ಲಿ ಬರ್ಡ್‌ ಗಾರ್ಡನ್‌ ರೂಪಿಸಲಾಗುತ್ತದೆ. ಇದು ಎಕ್ಸ್‌ಪ್ರೆಸ್‌ ವೇ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೇ, ಪಕ್ಷಿಗಳ ಆವಾಸಸ್ಥಾನವಾಗಿ ರೂಪುಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next