Advertisement

ಭಾರತಕ್ಕೆ ಆಗಮಿಸಿದ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌

01:12 AM May 05, 2023 | Team Udayavani |

ಪಣಜಿ: ಗೋವಾದಲ್ಲಿ ನಡೆಯಲಿರುವ ಶಾಂಘಾಯ್‌ ಸಹಕಾರ ಸಂಘದ ಸಮಾವೇಶ­ದಲ್ಲಿ (ಎಸ್‌ಸಿಒ) ಪಾಲ್ಕೊಳ್ಳಲು ಪಾಕಿಸ್ಥಾನ‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಗುರುವಾರ ಆಗಮಿಸಿದರು. ಬಹುಕಾಲದ ಅನಂತರ ಭಾರತಕ್ಕೆ ಆಗ ಮಿಸಿರುವ ಪ್ರಮುಖ ನಾಯಕ ಬಿಲಾವಲ್‌. ಗೋವಾಕ್ಕೆ ಬಂದಿಳಿದ ಬಳಿಕ‌ ಸಲಾಮ್‌ ಫ‌ಮ್‌ ಗೋವಾ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಝಾಂಗ್‌ ಮಿಂಗ್‌ ಜತೆಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತುಕತೆ ನಡೆಸಿದ್ದಾರೆ.

Advertisement

ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿ ಸ್ಥಾನ‌ದ ಕುಮ್ಮಕ್ಕು ಇಲ್ಲಿ ಪ್ರಾಮುಖ್ಯ ಪಡೆದಿದೆ. ಅದನ್ನು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನೇರವಾಗಿ ಪ್ರಸ್ತಾವಿಸಿ ಪಾಕಿಸ್ಥಾನ‌ದ ವಿರುದ್ಧ ಕಿಡಿಕಾರಿದ್ದಾರೆ. ಹಾಗಾಗಿ ಬಿಲಾವಲ್‌-ಜೈಶಂಕರ್‌ ಮಾತುಕತೆ ನಡೆಯುವುದು ಕಷ್ಟವೆನಿಸಿದೆ. “ಪಾಕಿಸ್ಥಾನ‌ದಿಂದ ಇದುವರೆಗೂ ಯಾವುದೇ ಕೋರಿಕೆ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ನಡುವೆ ಇದುವರೆಗೂ ಯಾವುದೇ ದ್ವಿ ಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ’ ಎಂದು ಶಾಂಘಾಯ್‌ ಸಹಕಾರ ಸಮಾವೇಶದ ಮೂಲಗಳು ತಿಳಿಸಿವೆ.

ಭಾರತ ಆಗಮನಕ್ಕೂ ಮುನ್ನ ಟ್ವೀಟ್‌ ಮಾಡಿದ ಬಿಲಾವಲ್‌ ಭುಟ್ಟೊ, “ಈ ಸಮಾವೇ ಶದಲ್ಲಿ ಪಾಲ್ಗೊಳ್ಳುವ ನನ್ನ ನಿರ್ಧಾರವು ಶಾಂಘಾಯ್‌ ಸಹಕಾರ ಒಕ್ಕೂಟದ ಬಗ್ಗೆ ಪಾಕಿಸ್ಥಾನದ ಬದ್ಧತೆ ಯನ್ನು ತೋರಿಸುತ್ತದೆ’ ಎಂದು ಬರೆದು ಕೊಂಡಿದ್ದಾರೆ. ಆದರೆ ಅವರೂ ಜೈಶಂಕರ್‌ ಜತೆಗಿನ ಮಾತುಕತೆ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next