Advertisement

Madikeri ಕ್ಯಾಂಟರ್‌ ವಾಹನದಡಿಗೆ ಸಿಲುಕಿ ಬೈಕ್‌ ಸವಾರ ಸಾವು

07:42 PM Oct 14, 2023 | Team Udayavani |

ಮಡಿಕೇರಿ: ಕ್ಯಾಂಟರ್‌ ವಾಹನದಡಿಗೆ ಸಿಲುಕಿ ಬೈಕ್‌ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೆಸಾರ್ಟ್‌ವೊಂದರ ಬಳಿ ನಡೆದಿದೆ.

Advertisement

ಮೂಲತಃ ಕೆ.ಆರ್‌. ನಗರದ ಬೇರ್ಯ ಗ್ರಾಮದ ನಿವಾಸಿ ಬೈರವ (28) ಮೃತರು. ಮಡಿಕೇರಿಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಕಾರೊಂದರ ಹಿಂಬದಿಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ ವಾಹನದ ಚಕ್ರ ಬೈಕ್‌ ಸವಾರನ ತಲೆ ಮೇಲೆ ಹರಿದು ಈ ಸಾವು ಸಂಭವಿಸಿದೆ.

ಬೈರವ ತಮ್ಮ ಬೈಕ್‌ ನಲ್ಲಿ ಮಡಿಕೇರಿಯಿಂದ ಕೆ.ಆರ್‌ ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next