Advertisement
ಕಳೆದ ಮೂರು ವರ್ಷಗಳಿಂದ ಬೈಕ್ ಮೂಲಕ ದೇಶ ಪರ್ಯಟನೆ ನಡೆಸುತ್ತಿರುವ ಕಾಪುವಿನ ಛಾಯಾಚಿತ್ರಗ್ರಾಹಕ ಸಚಿನ್ ಶೆಟ್ಟಿ ಅವರ ಈ ಬಾರಿಯ ಮಿಡ್ಲ್ಯಾಂಡ್ ರಾಜ್ಯಗಳತ್ತ ಪರ್ಯಟನೆಗೆ ಪಡುಬಿದ್ರಿಯ ಸರ್ವಿಸ್ ಸ್ಟೇಷನ್ ಮಾಲಕ ದಿನೇಶ್ ಕೋಟ್ಯಾನ್ ಹೆಜಮಾಡಿ ಮತ್ತು ಛಾಯಾಚಿತ್ರಗ್ರಾಹಕ ರವಿ ಆಚಾರ್ಯ ಮೂಡುಬಿದಿರೆ ಅವರು ಕೈ ಜೋಡಿಸಿದ್ದಾರೆ.
3 ಲಕ್ಷ ರೂ. ವೆಚ್ಚ
411 ಸಿಸಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ ಮೂಲಕ 45 ದಿನಗಳ ಕಾಲ ನಡೆಯಲಿರುವ 10 ಸಾವಿರ ಕೀ. ಮೀ. ದೂರದವರೆಗೆ ರೈಡ್ ಟು ಮಿಡ್ಲ್ಯಾಂಡ್ (ಉಡುಪಿ-ಸ್ವಿಟಿ-ಉಡುಪಿ) ಎಂಬ ಹೆಸರಿನ ಸಾಹಸ ಯಾತ್ರೆ ನಡೆಸಲಿದ್ದು, ಇದಕ್ಕೆ 3 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.
Related Articles
ಕಾಪುವಿನಿಂದ ಪ್ರಾರಂಭಗೊಂಡ ಮಿಡ್ಲ್ಯಾಂಡ್ ಪರ್ಯಟನೆಯು ಉಡುಪಿ, ಪುಣೆ, ಮುಂಬೈ, ವಡೋದರಾ, ಉದಯಪುರ, ಜೈಪುರ, ಕುರುಕ್ಷೇತ್ರ, ಜಿಬಿ, ಚಿತುಲ್, ತಾಬೊ, ಮಡ್ ವಿಲೇಜ್, ಖಾಝ, ಚಂದ್ರತಾಲ್, ಮನಾಲಿ, ಚಂಡೀಗಡ, ಆಗ್ರಾ, ಇಂದೋರ್, ಔರಂಗಾಬಾದ್, ಸೋಲಾಪುರ, ಹಂಪಿ, ಬೆಂಗಳೂರು, ಮಡಿಕೇರಿ, ಮಂಗಳೂರು ಮೂಲಕ ಕಾಪುವಿಗೆ ಬಂದು ಸಮಾಪನಗೊಳ್ಳಲಿದೆ.
Advertisement
ವರ್ಷಕ್ಕೆ 13,000 ಕಿ.ಮೀ. ಸಂಚಾರ ಗುರಿ2017ರಲ್ಲಿ ಲೈಟ್ಸ್ ಕೆಮರಾ ಲಡಾಕ್ ಎಂಬ ಘೋಷಣೆಯೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ 32 ದಿನಗಳ ಕಾಲ 13 ಸಾವಿರ ಕಿ.ಮೀ. ದೂರದ ಪಯಣ, 2018ರಲ್ಲಿ ಸ್ನೇಹಿತ ಅಭಿಷೇಕ್ ಶೆಟ್ಟಿಯವರೊಂದಿಗೆ ಗೋ ಹಿಮಾಲಯಾಸ್ ಎಂಬ ಘೋಷಣೆಯೊಂದಿಗೆ ಇಂಡಿಯಾ ಟು ಭೂತಾನ್ 40 ದಿನಗಳ 13,560 ಕಿ. ಮೀ. ಬೈಕ್ ಸಾಹಸ ಯಾತ್ರೆ ನಡೆಸಿದ್ದರು. ಈ ಬಾರಿ ಕೂಡಾ 45 ದಿನಗಳ ಸಂಚಾರದ ವೇಳೆ 10 ಸಾವಿರ ಕಿಮೀ. ಗೂ ಮಿಕ್ಕ ಸಂಚಾರದ ಗುರಿ ಹೊಂದಿದ್ದಾರೆ. ಹವ್ಯಾಸಿಗಳ ಜತೆ ಕೈ ಜೋಡಿಸಿದ
ಸರ್ವಿಸ್ ಸ್ಟೇಷನ್ ಮಾಲಕ
ಹವ್ಯಾಸಿ ಬೈಕ್ ರೈಡರ್ ಆಗಿರುವ ಸಚಿನ್ ಶೆಟ್ಟಿ ಅವರು ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರಾಗಿದ್ದು, ಇವರೊಂದಿಗೆ ಪ್ರಥಮ ಬಾರಿಗೆ ಬೈಕ್ ಸಾಹಸ ಯಾತ್ರೆ ಕೈಗೊಳ್ಳಲಿರುವ ದಿನೇಶ್ ಕೋಟ್ಯಾನ್ ಅವರು ಪಡುಬಿದ್ರಿಯಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದಾರೆ. ಮಂಗಳೂರಿನ ವೈ.ಎಂ.ಸಿ ಸಂಸ್ಥೆಯಡಿ ಅಂತಾರಾಜ್ಯ ಬೈಕ್ ಯಾತ್ರೆ ನಡೆಸಿರುವ ರವಿ ಆಚಾರ್ಯ ಅವರು ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರಾಗಿದ್ದಾರೆ.
ಕಾಪು ಹಳೇ ಮಾರಿಗುಡಿ ದೇವಸ್ಥಾನದ ಬಳಿ ನಡೆದ ಯಾತ್ರೆಗೆ ಚಾಲನೆ ನೀಡುವ ಸರಳ ಸಮಾರಂಭದಲ್ಲಿ ಸಮಾಜರತ್ನ ಕೆ. ಲೀಲಾಧರ ಶೆಟ್ಟಿ, ಎಸ್.ಕೆ.ಪಿ.ಎ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವಾಸುದೇವ ರಾವ್, ಪುರಸಭೆ ಸದಸ್ಯ ಅನಿಲ್ ಕುಮಾರ್, ಎಸ್.ಕೆ.ಪಿ.ಎ ಕಾಪು ವಲಯದ ಅಧ್ಯಕ್ಷ ವೀರೇಂದ್ರ ಪೂಜಾರಿ ಶಿರ್ವ, ದಿವಾಕರ ಶೆಟ್ಟಿ ಮಲ್ಲಾರು, ಜಯಶ್ರೀ ಶೆಟ್ಟಿ, ವಿವಿಧ ಸಂಘ – ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಜಾಗೃತಿ ಮೂಡಿಸುವ ಉದ್ದೇಶ
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಆ ಮೂಲಕ ಜನರಲ್ಲಿ ಸಾಂಸ್ಕೃತಿಕವಾದ ಜಾಗೃತಿಯನ್ನು ಮೂಡಿಸಬೇಕು ಎಂಬ ಸಂಕಲ್ಪದೊಂದಿಗೆ ದೇಶ ಸುತ್ತಲು ಆಲೋಚನೆ ಮಾಡಿದ್ದೇನೆ. ವಿವಿಧ ರಾಜ್ಯಗಳ ಜನಜೀವನವು ನಡೆಸುತ್ತಿರುವ ಆಚಾರ-ವಿಚಾರ, ಆಹಾರ ಶೈಲಿ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ಚಟುವಟಿಕೆಗಳ ಅಧ್ಯಯನ ನಡೆಸಿ, ಚಿತ್ರೀಕರಣದ ಉದ್ದೇಶ ಹೊಂದಿದ್ದು, ಇದರೊಂದಿಗೆ ಸಂಚಾರಿ ಕಾನೂನು ನಿಯಮಗಳನ್ನು ಪಾಲಿಸುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ.
– ಸಚಿನ್ ಶೆಟ್ಟಿ ಕಾಪು ಉದ್ದೇಶ ಫಲಪ್ರದವಾಗಲಿ
ಯಾತ್ರೆಯ ವೇಳೆ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಜನಜಾಗೃತಿ, ವಿವಿಧ ರಾಜ್ಯಗಳ ಜನರ ಜನಜೀವನ, ಸ್ಥಿತಿ ಗತಿ, ಆಚಾರ-ವಿಚಾರ, ಸಂಸ್ಕಾರ, ಸಂಪ್ರದಾಯಗಳ ಬಗ್ಗೆ ಅಧ್ಯಯನ ಮಾಡಿ, ಆ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವ ಉದ್ದೇಶದೊಂದಿಗೆ ಕಾಪುವಿನ ಯುವಕರು ಕೈಗೆತ್ತಿಕೊಂಡಿರುವ ಬೈಕ್ ಸಾಹಸ ಯಾತ್ರೆ ಯಶಸ್ವಿಯಾಗಲಿ. ಯುವಕರು ಯಾತ್ರೆಯ ಜತೆಗೆ ಸಂಚಾರಿ ನಿಯಮಗಳನ್ನು ಪಾಲನೆಮಾಡುವುದರೊಂದಿಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವಂತಾಗಲಿ.
– ಮಹೇಶ್ ಪ್ರಸಾದ್, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು