Advertisement

ಟಿಪ್ಪು ಜಯಂತಿಗಾಗಿ ಬೈಕ್‌ ರ‍್ಯಾಲಿ; ಪೊಲೀಸರ ಮೇಲೆ ಕಲ್ಲು 

04:17 PM Nov 03, 2017 | |

ಬಾಗಲಕೋಟೆ: ನವೆಂಬರ್‌ 10 ರಂದು ರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಟಿಪ್ಪು ಜಯಂತಿ  ಕುರಿತಾಗಿ ಪರ ವಿರೋಧದ ಚರ್ಚೆಗಳು ತೀವ್ರಗೊಂಡಿದ್ದು, ಹುನಗುಂದದ  ಇಳಕಲ್‌ ಗ್ರಾಮದಲ್ಲಿ ಎಂಐಎಂ ಕಾರ್ಯಕರ್ತರು ನಡೆಸುತ್ತಿದ್ದ  ಬೈಕ್‌ ರ‍್ಯಾಲಿ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಘಟನೆ ಶುಕ್ರವಾರನಡೆದಿದೆ. 

Advertisement

ಯಾವುದೇ ಬೈಕ್‌ ರ‍್ಯಾಲಿ ನಡೆಸಲು ಅನುಮತಿ ನೀಡಲು ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಅನುಮತಿ ಇಲ್ಲದೆ ಬೈಕ್‌ ರ‍್ಯಾಲಿ ನಡೆಸುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ಎಂಐಎಂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕಿಡಿಗೇಡಿಗಳು ಪೊಲೀಸರತ್ತ ಕಲ್ಲು ತೂರಿದ್ದಾರೆ. 

ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು 10 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next