Advertisement

ಬೈಕ್‌ ನಿಲುಗಡೆ: ಸಂಚಾರಕ್ಕೆ ಅಡ್ಡಿ

01:13 PM Jan 18, 2022 | Team Udayavani |

ಚಿಂಚೋಳಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ರಸ್ತೆಯ ಪಕ್ಕದಲ್ಲಿಯೇ ಬೈಕ್‌ಗಳನ್ನು ನಿಲ್ಲಿಸಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿ ರುವುದನ್ನು ನಿಯಂತ್ರಿಸಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಚಿಂಚೋಳಿ-ತಾಂಡೂರ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಬರುವ ಬಸವೇಶ್ವರ ವೃತ್ತದಲ್ಲಿ ಕಳೆದ ಒಂದು ತಿಂಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ. ಆದರೆ ಪಕ್ಕದ ಗ್ಯಾರೇಜ್‌ಗೆ ದುರಸ್ತಿಗಾಗಿ ಬಂದಂತಹ ಎಲ್ಲ ಬೈಕ್‌ ಗಳನ್ನು ಮುಖ್ಯ ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿ ಕಾಮಗಾರಿಗೆ ಅಡ್ಡಿಸುತ್ತಿದ್ದಾರೆ ಮತ್ತು ದಿನನಿತ್ಯ ಸಂಚರಿಸುವ ವಾಹನಗಳ ಸಂಚಾರಕ್ಕೆ ಭಾರಿ ತೊಂದರೆ ಆಗುತ್ತಿದೆ. ಪೊಲೀಸರು ಕ್ರಮಕ್ಕೆ ಮುಂದಾಗಬೇಕು ಎಂದು ಸಮಾಜ ಸೇವಕ ಮಸ್ತಾನ್‌ ದೇಗಲಮಡಿ ಆಗ್ರಹಿಸಿದ್ದಾರೆ.

ರಾಜ್ಯ ಹೆದ್ದಾರಿ ಆಗಿರುವುದರಿಂದ ಇದೇ ರಸ್ತೆ ಮಾರ್ಗದಿಂದ ತಾಂಡೂರ, ಹುಮನಾಬಾದ್‌, ಕಲಬುರಗಿ, ಮನ್ನಾಎಕ್ಕೆಳ್ಳಿ, ಸೇಡಂ, ಚಿಟಗುಪ್ಪ, ನಗರ ಪ್ರದೇಶಗಳಿಗೆ ಮತ್ತು ಸಿಮೆಂಟ್‌ ಕಂಪನಿಯಿಂದ ಸಿಮೆಂಟ್‌ ತುಂಬಿದ ಲಾರಿಗಳ ಸಂಚರಿಸುತ್ತವೆ. ಜನದಟ್ಟಣೆ ಮತ್ತು ಪ್ರಮುಖ ಸ್ಥಳವಾಗಿರುವುದರಿಂದ ಇಲ್ಲಿ ಜನರ ಓಡಾಟ ಹೆಚ್ಚಾಗಿದೆ. ಆದರೆ ಬೈಕ್‌ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಗ್ಯಾರೇಜ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next