Advertisement

ತಿರುಪತಿ ಪಾದಯಾತ್ರಿಗೆ ಬೈಕ್‌ ಡಿಕ್ಕಿ: ಗಾಯ

12:18 PM Jan 02, 2018 | Team Udayavani |

ಮುಳಬಾಗಿಲು: ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಯಾತ್ರಿಯೊಬ್ಬರಿಗೆ ಬೈಕ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಬೆಂಗಳೂರಿನ ಮಾಗಡಿ ರಸ್ತೆಯ ವಾಸಿ ಗಾಂಧಿ(45) ಎನ್ನಲಾಗಿದೆ. ಜನವರಿ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ಪಾದಯಾತ್ರಿಕರ ಸಮಿತಿ ಬೆಂಗಳೂರಿನಿಂದ ಹಲವಾರು ಭಕ್ತಾದಿಗಳನ್ನು ತಿರುಪತಿಗೆ ಕರೆದೊಯ್ಯುತ್ತಿದ್ದರು. ಸೋಮವಾರ ಭಕ್ತಾದಿಗಳು ಬೆಂಗಳೂರಿನಿಂದ ತಿರುಪತಿಗೆ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು.

ಆಗ ಮುಳಬಾಗಿಲು ಹೊರವಲಯದ ಮದರಸಾ ಬಳಿ ಪಾದಚಾರಿ ಯಾತ್ರಿ ಗಾಂಧಿ ಅವರಿಗೆ ಬೆಂಗಳೂರಿನ ಆವಲಹಳ್ಳಿ ಮೂಲದ ಬೈಕ್‌ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಗಾಂಧಿ ಅವರನ್ನು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next