Advertisement

ಮರಕ್ಕೆ ಬೈಕ್‌ ಡಿಕ್ಕಿ; ಯೋಧ ಸ್ಥಳದಲ್ಲೇ ಸಾವು

10:32 PM May 17, 2019 | Team Udayavani |

ವಿಜಯಪುರ: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಯೋಧನೊಬ್ಬ ಮೃತಪಟ್ಟ ಘಟನೆ ತಿಕೋಟಾ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ದಾಸ್ಯಾಳ ಗ್ರಾಮದ ಶರಣಯ್ಯ ಮಠಪತಿ (29) ಮೃತ ಯೋಧ.

Advertisement

ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್‌ ಹಾಗೂ ಮಹಾರಾಷ್ಟ್ರ ಜತ್‌ ರಸ್ತೆಯಲ್ಲಿ ಶುಕ್ರವಾರ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next