Advertisement

ಬೈಕ್‌-ಕಾರು ಜಪ್ತಿ; ಮೂವರ ಬಂಧನ

10:44 AM Oct 12, 2021 | Team Udayavani |

ಬೀದರ: ಬಸವಕಲ್ಯಾಣ ತಾಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸೋಮವಾರ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣ ಪತ್ತೆ ಹಚ್ಚಿದ್ದು, 4.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಮೂರು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಮುಡಬಿ ಗ್ರಾಮದ ಶಿವಶರಣ ಶಾಮರಾವ್‌, ಶಿವಕುಮಾರ ದತ್ತಾತ್ರಿ ಮತ್ತು ಕಲಬುರಗಿ ಜಿಲ್ಲೆ ಕುಬಮೋಳ ಗ್ರಾಮದ ಭೂಷನ ಬಿರಾದಾರ ಬಂಧಿತ ಆರೋಪಿತರು. ಬಂಧಿತರಿಂದ 62.640 ಲೀ. ಮದ್ಯ, 35.550 ಲೀ. ಬಿಯರ್‌, 1 ದ್ವಿಚಕ್ರ ವಾಹನ ಮತ್ತು ಒಂದು ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.

ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಸುರೇಶ ಶಂಕರ, ಉಪ ನಿರೀಕ್ಷಕ ದಿಲೀಪಸಿಂಗ್‌ ಠಾಕೂರ, ಜಿಲ್ಲಾ ಸ್ಕ್ವಾಡ್‌ ಮತ್ತು ಇತರೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next