Advertisement

ಕಾರು ಢಿಕ್ಕಿ: ಸ್ಕೂಟಿ ಸವಾರ ಸಾವು

09:58 AM Nov 25, 2018 | |

ಅಜೆಕಾರು/ಹೆಬ್ರಿ: ಮುನಿಯಾಲು ಸಮೀಪದ ಚಟ್ಕಲ್‌ಪಾದೆ ಬಳಿ ಶನಿವಾರ ಬೆಳಗ್ಗೆ ಸ್ಕೂಟಿ ಹಾಗೂ  ಸ್ವಿಫ್ಟ್ ಕಾರು ಪರಸ್ಪರ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಸಾವನ್ನಪ್ಪಿದ್ದಾರೆ. 

Advertisement

ಎಳ್ಳಾರೆ ಮಾವಿನಕಟ್ಟೆ ನಿವಾಸಿ ರಮೇಶ್‌ ಶೆಟ್ಟಿಗಾರ್‌ (47) ಅವರು  ಪುತ್ರಿಯನ್ನು ಉಡುಪಿಯ ಕಾಲೇಜಿಗೆ ಕಳುಹಿಸಲು ಮುನಿಯಾಲು ಬಸ್ಸು ನಿಲ್ದಾಣಕ್ಕೆ ಬಂದು ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ಸಂಭವಿಸಿದೆ.  ಹೆಬ್ರಿ ಕಡೆಯಿಂದ ಬರುತ್ತಿದ್ದ ಮಹಾರಾಷ್ಟ್ರ  ನೋಂದಣಿಯ ಕಾರು ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ರಮೇಶ್‌ ಶೆಟ್ಟಿಗಾರ್‌ ಗಂಭೀರ ಗಾಯಗೊಂಡರು. 


ಕೂಡಲೇ ಸ್ಥಳೀಯರು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಹೆಬ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಲ್ಲಿಗೆ ತಲುಪುವ ಮೊದಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಕಾಜಲ್‌ ಗಡಾ (41), ಚಿನ್ಮಯಿ (18) ಹಾಗೂ ಚಿರಂಜಿತ್‌ ದಾಸ್‌ (30) ಅವರಿಗೆ ತರಚಿದ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ  ಸೇರಿಸಲಾಗಿದೆ. ಕಾರು ಚಾಲಕ ಉಫೇನ್‌ ಗಡಾರಿ ಗಾಯಗಳಿಲ್ಲದೆ ಪಾರಾಗಿದ್ದಾರೆ.  ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾ ಗಿದ್ದು, ಕಾರಿನ ಮುಂಭಾಗವೂ ಜಖಂಗೊಂಡಿದೆ.  ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಲೇಜು ಸೇರಲು ಬರುತ್ತಿದ್ದರು 
ಮೂಡುಬಿದ್ರೆಯ ಕಾಲೇಜೊಂದರಲ್ಲಿ ಮೆಡಿಕಲ್‌ ಸೀಟ್‌ ದೊರೆತ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರೈಲಿನಲ್ಲಿ ಟಿಕೆಟ್‌ ಸಿಗದ ಕಾರಣ ಕಾರಿನಲ್ಲಿ ಬರುತ್ತಿದ್ದರು. ರಾತ್ರಿಯಿಡಿ ನಿದ್ದೆಬಿಟ್ಟು ಕಾರು ಚಾಲಯಿಸಿದ ಕಾರಣ ಬೆಳಗ್ಗೆ ಹೊತ್ತು ನಿದ್ದೆಗೆ ಜಾರಿ ಚಾಲಕ ನಿಯಂತ್ರಣ ತಪ್ಪಿ ಬೈಕ್‌ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಸ್ಥಳೀಯರಾದ ಪ್ರಸನ್ನ ಶೆಟ್ಟಿ ಅವರು  ಹೆಬ್ರಿ ಠಾಣೆ ಹಾಗೂಆಂಬುಲೆನ್ಸ್ಗೆ ಮಾಹಿತಿ ನೀಡಿ ಗಾಯಳುಗಳನ್ನು ರಕ್ಷಿಸಿ ವಿದ್ಯಾರ್ಥಿಯನ್ನು ಕೂಡಲೇ ಮೂಡುಬಿದ್ರೆಗೆ ಬೇರೆ ವಾಹನದಲ್ಲಿ ಕಳುಹಿಸಿ ನೆರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next