Advertisement

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

03:08 PM Sep 17, 2021 | Team Udayavani |

ಚಿಕ್ಕಮಗಳೂರು: ಫೋನ್‌ ನಲ್ಲಿ ಮಾತಾಡಿಕೊಂಡು ಬಂದ ಬೈಕ್ ಸವಾರನೊಬ್ಬನ ಎಡವಟ್ಟಿನ ಕಾರಣದಿಂದ ಮತ್ತೊಂದು ಬೈಕ್ ಸವಾರ ಲಾರಿಗೆ ಢಿಕ್ಕಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಪಘಾತ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

Advertisement

ಚಿಕ್ಕಮಗಳೂರು ನಗರದ ಕೆ.ಎಂ ರಸ್ತೆಯ ಮಲಬಾರ್ ಗೋಲ್ಡ್ ಮುಂಭಾಗ ಘಟನೆ ನಡೆದಿದೆ. ಏಕಮುಖ ಸಂಚಾರ ರಸ್ತೆಯಲ್ಲಿ ಫೋನ್ ನಲ್ಲಿ ಮಾತನಾಡಿಕೊಂಡು ಮತ್ತೊಂದು ಬೈಕ್ ಸವಾರನ ಎಡವಟ್ಟು ಅಪಘಾತಕ್ಕೆ ಕಾರಣವಾಗಿದೆ. ಮತ್ತೊಂದು ಕಡೆಯಿಂದ ಬಂದ ಬೈಕ್ ಸವಾರ ದಾರಿ ಬಿಡಲು ಹೋಗಿ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಢಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಆತನ ಕೈಮೇಲೆ ಲಾರಿ ಚಕ್ರ ಹರಿದಿದೆ. ಅವರ ಎಡಗೈಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ  ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next