Advertisement

ಬೈಕ್ ಅಪಘಾತ : ಓರ್ವ ಸವಾರನಿಗೆ ಗಾಯ

09:06 PM Oct 02, 2021 | Team Udayavani |

ನಂಜನಗೂಡು: ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಚರ್ಚ ಬಳಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಓರ್ವನ ಕಾಲು ಮುರಿದಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ನೀಲಕಂಠ ನಗರ ಬಡಾವಣೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿಕೊಳ್ಳುವ ಸ್ಥಳದಲ್ಲಿ  ಬುಲ್ಲೆಟ್ ವಾಹನ, ಹೊಂಡಾ ಯ್ಯಾಕ್ಟೀವ್ ಗೆ ಗುದ್ದಿದೆ. ಪರಿಣಾಮ ಹೊಂಡಾ  ಆ್ಯ್ಯಕ್ಟಿವ್ ವಾಹನ ಸವಾರ ವಿರುಪಾಕ್ಷಪ್ಪನ ಕಾಲು ಮುರಿದಿದೆ. ಈತನನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಕುರಿತು ನಂಜನಗೂಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next