Advertisement

Accident: ಬೈಕ್‌ ಅಪಘಾತ: ವಿದ್ಯಾರ್ಥಿ ಸಾವು

01:15 AM Sep 15, 2023 | Team Udayavani |

ಮಂಗಳೂರು: ನಗರದ ಪಡೀಲ್‌ ಅಂಡರ್‌ಪಾಸ್‌ನಲ್ಲಿ ನಡೆದ ಬೈಕ್‌ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಬಜಾಲ್‌ ಪಲ್ಲಕೆರೆ ನಿವಾಸಿ ಭವಿನ್‌ರಾಜ್‌ (20) ಮೃತಪಟ್ಟವರು. ಗಾಡ್ವಿನ್‌ (19) ಮತ್ತು ಆಶಿತ್‌ (17) ಗಾಯಗೊಂಡಿದ್ದಾರೆ.

Advertisement

ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಭವಿನ್‌ರಾಜ್‌ ಅವರು ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಪಡೀಲ್‌ ಅಂಡರ್‌ಪಾಸ್‌ ಬಳಿ ಬೈಕ್‌ ನಿಯಂತ್ರಣ ತಪ್ಪಿ ಅಂಡರ್‌ಪಾಸ್‌ನ ಫುಟ್‌ಪಾತ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಮೂವರು ಬೈಕಿನಿಂದ ಬಿದ್ದು ಗಾಯಗೊಂಡಿದ್ದರು. ಭವಿನ್‌ರಾಜ್‌ ಮೃತಪಟ್ಟಿದ್ದಾರೆ. ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next