Advertisement

ಬೈಕ್‌ ಅಪಘಾತ: ಗಂಭೀರ ಗಾಯಗೊಂಡಿದ್ದ ರೈತ ಸಾವು

08:27 PM Aug 19, 2022 | Team Udayavani |

ಕೊರಟಗೆರೆ: ಹಾಲಿನ ಡೈರಿಯಿಂದ ಹಸುವಿಗೆ ಫೀಲ್ಡ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ವ್ಯಕ್ತಿಯೋರ್ವನಿಗೆ ಬೈಕ್ ಒಂದು ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ 3 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೊರಟಗೆರೆ ತಾಲೂಕಿನ ಹುಲಿಕುಂಟೆ ನಿವಾಸಿ ಮಹಮ್ಮದ್ ಫಕ್ರುದ್ದೀನ್ ಸಾಬ್  (67) ಮೃತ ದುರ್ದೈವಿ.

ಮೃತ ಮಹಮ್ಮದ್ ಫಕ್ರುದ್ದೀನ್ ಸಾಬ್ ಇದೇ ಗ್ರಾಮದ ಹಾಲಿನ ಡೈರಿಗೆ ಪ್ರತಿ ದಿನ ಹಾಲು ಹಾಕುತ್ತಿದ್ದು, ಸೀಮೆ ಹಸುವಿಗೆ ಫೀಲ್ಡ್ ಗಾಗಿ ಡೈರಿಗೆ ಬಂದು ಫೀಲ್ಡ್ ಹೊತ್ತುಕೊಂಡು ರಸ್ತೆ ದಾಟುವ ಸಂದರ್ಭ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಫಕ್ರುದ್ದೀನ್ ಸಾಬ್ ಗಂಭೀರ ಗಾಯಗೊಂಡು ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಐಟಿಬಿಪಿ ಕ್ಯಾಂಪ್‌ನಲ್ಲಿ 2ಎಕೆ-47 ರೈಫಲ್‌ ಕಳವು: ಯೋಧರು ಮಲಗಿದ್ದಾಗ ನಡೆದ ಘಟನೆ

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು  ಪ್ರಕರಣ ದಾಖಲಿಸಿ, ಸಿಪಿಐಕೆ ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next