Advertisement

ಅಡ್ಡ ಬಂದ ಬೀದಿ ನಾಯಿ: ಬೈಕ್‌ ಸವಾರರಿಬ್ಬರ ಸಾವು

01:26 PM Jul 23, 2022 | Team Udayavani |

ಚಾಮರಾಜನಗರ: ಬೈಕ್‌ಗೆ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯತಪ್ಪಿ ಬೈಕ್‌ನಿಂತ ಬಿದ್ದು ಇಬ್ಬರು ಸವಾರರು ಮೃತಪಟ್ಟ ಘಟನೆ ನಗರದ ಹೊರವಲಯದ ಮಾದಾಪುರ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಕಟ್ನವಾಡಿ ಗ್ರಾಮದ ಶಿವಮೂರ್ತಿ(46) ಹಾಗೂ ಮಹಾದೇವಪ್ಪ(52) ಮೃತರು.

ಇವರಿಬ್ಬರು ಗ್ರಾಮದಿಂದ ಮಲೆಮಹ ದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಶುಕ್ರವಾರ ಬೆಳಗ್ಗೆ ನಗರ ದಾಟಿ ಮಾದಾಪುರ ಬಳಿ ಹೋಗುತ್ತಿದ್ದಾಗಬೀದಿ ನಾಯಿ ರಸ್ತೆಯಲ್ಲಿ ಅಡ್ಡ ಬಂದಿದೆ. ಅದಕ್ಕೆ ಗುದ್ದುವುದುನ್ನು ತಪ್ಪಿಸಲು ಹೋಗಿ, ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಮುಂಬದಿ ಸವಾರ ಶಿವಮೂರ್ತಿ ಸ್ಥಳದಲ್ಲಿಯೇಮೃತಪಟ್ಟರೆ, ಹಿಂಬದಿ ಸವಾರ ಮಹದೇವಪ್ಪ ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಮಧ್ಯಾಹ್ನದ ವೇಳೆಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next