Advertisement

ಬಿಜೆಪಿಯಲ್ಲಿನ ಗೊಂದಲ ಬಗೆಹರಿದಿದೆ: ಬಿಎಸ್‌ವೈ

03:45 AM Feb 05, 2017 | Team Udayavani |

ಕಲಬುರಗಿ: ಬಿಜೆಪಿಯಲ್ಲಿನ ಗೊಂದಲ ಬಗೆಹರಿದಿದೆ. ತಾವು ಹಾಗೂ ಈಶ್ವರಪ್ಪ ಒಟ್ಟಾಗಿದ್ದೇವೆ. ನಮ್ಮಲ್ಲೀಗ ಯಾವುದೇ ವೈಷಮ್ಯವಿಲ್ಲ. ಫೆ. 12ರಂದು ಹಿಂದುಳಿದ ವರ್ಗದ ಮುಖಂಡರ ಸಭೆ ಕರೆಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಗಾಗಿ ಸಭೆ ಕರೆಯಲಾಗಿದೆ. ಸಭೆ ನಂತರ ತಾವು, ಈಶ್ವರಪ್ಪ ಪಕ್ಷದ ಮುಖಂಡರೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇವೆ ಎಂದು ಬಿಎಸ್‌ ವೈ ತಿಳಿಸಿದರು. ಮಾಜಿ ಸಚಿವ ಸೋಮಣ್ಣ ಅವರಿಗೆ ಯಾವುದೇ ರೀತಿಯ ಅಸಮಾಧಾನ, ಅನ್ಯಾಯವಾಗಿಲ್ಲ.

Advertisement

ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಉತ್ತರ ಪ್ರದೇಶ, ಗೋವಾ ಸೇರಿದಂತೆ ಪಂಚರಾಜ್ಯಗಳ
ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next