Advertisement

ಬಿಹಾರ, ಜಾರ್ಖಂಡ್‌ಗೆ ವಿಜ್ಞಾನದ ಆಸಕ್ತಿಯಿಲ್ಲ? ವಿಜ್ಞಾನ ಸಮಾವೇಶಕ್ಕೆ 2 ರಾಜ್ಯಗಳ ಗೈರು

09:17 PM Sep 10, 2022 | Team Udayavani |

ಅಹಮದಾಬಾದ್‌: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎರಡು ದಿನಗಳ ವಿಜ್ಞಾನ ಸಮಾವೇಶ ಶನಿವಾರ ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿ ಆರಂಭವಾಗಿದೆ. ಜಾರ್ಖಂಡ್‌ ಮತ್ತು ಬಿಹಾರ ಸರ್ಕಾರಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದಾರೆ.

Advertisement

ಆ ಎರಡು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಯ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿ, ಅಲ್ಲಿನ ನಾಯಕರಿಗೆ ವಿಜ್ಞಾನ ಮತ್ತು ನಾವಿನ್ಯತೆ ಬಗ್ಗೆ ಆಸಕ್ತಿ ಇಲ್ಲವೆಂದು ದೂರಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು, “ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ವಿಜ್ಞಾನ, ನಾವೀನ್ಯತೆಗೆ ಸಂಬಂಧಿಸಿದಂತೆ ಹೊಸ ನೀತಿಗಳನ್ನು ರಚಿಸಬೇಕು. ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌, ಜೈ ಅನುಸಂಧಾನ್‌ ಎನ್ನುವುದೇ ನಮ್ಮ ಮಂತ್ರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next