Advertisement

Bigg Boss Malayalam 5: ನಿರೂಪಕ ಮೋಹನ್‌ ಲಾಲ್‌ ಗೆ ಅಗೌರವ; ಅರ್ಧದಲ್ಲೇ ಹೊರನಡೆದ ನಟ

01:53 PM Apr 10, 2023 | Team Udayavani |

ಕೊಚ್ಚಿ: ʼಬಿಗ್ ಬಾಸ್ ಮಲಯಾಳಂ 5ʼ ಕಾರ್ಯಕ್ರಮದ ʼಈಸ್ಟರ್‌ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್‌ ಲಾಲ್‌ ಅವರು ತಾಳ್ಮೆ ಕಳೆದುಕೊಂಡು ಅರ್ಧದಲ್ಲೇ ಶೋ ಬಿಟ್ಟು ತೆರಳಿರುವ ಘಟನೆ ನಡೆದಿದೆ.

Advertisement

ಬಿಗ್‌ ಬಾಸ್‌ ʼಬಿಗ್ ಬಾಸ್ ಮಲಯಾಳಂ ಸೀಸನ್‌ 5 ಕಾರ್ಯಕ್ರಮದಲ್ಲಿ ಭಾನುವಾರ ʼಈಸ್ಟರ್‌ ಹಬ್ಬʼಕ್ಕೆ ವಿಶೇಷ ಟಾಸ್ಕ್‌ ವೊಂದನ್ನು ನೀಡಲಾಗಿದೆ. ಟಾಸ್ಕ್ ವೇಳೆ ಅಖಿಲ್ ಮಾರಾರ್ ಅವರು ಪ್ರತಿಸ್ಪರ್ಧಿ ಮೇಲೆ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಏಂಜಲೀನಾ, ಸಾಗರ್ ಮತ್ತು ಜುನೈಜ್ ಅವರ ಮೇಲೆ ಈ ರೀತಿಯ ಪದಗಳನ್ನು ಬಳಸಿದ್ದಾರೆ.

ಇದಾದ ಬಳಿಕ ಈ ವಿಚಾರವನ್ನು ಮೋಹನ್‌ ಅವರ ಮುಂದೆ ಸ್ಪರ್ಧಿಗಳು ಗಮನಕ್ಕೆ ತಂದಿದ್ದಾರೆ. ಮೋಹನ್‌ ಲಾಲ್‌ ಇದಕ್ಕೆ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಅಖಿಲ್‌ ಸ್ಪರ್ಧಿಗಳ ಬಳಿ ಕ್ಷಮೆ ಕೇಳಿದ್ದಾರೆ. ಮೋಹನ್‌ ಲಾಲ್‌ ಅಖಿಲ್‌ ಅವರಿಗೆ ಕ್ಯಾಪ್ಟನ್‌ ಬ್ಯಾಂಡ್‌ ನ್ನು ಸಾಗರ್‌ ಅವರಿಗೆ ನೀಡಿ ಎಂದಿದ್ದಾರೆ. ಆದರೆ ಸಾಗರ್‌ ಅವರು ನನ್ನ ಬಳಿ ಕ್ಷಮೆ ಕೇಳಬೇಕೆಂದಿದ್ದಾರೆ. ಇದಕ್ಕೆ ಅಖಿಲ್‌ ನಾನು ಆತನ ಬಳಿ ಕ್ಷಮೆ ಕೇಳಲ್ಲ ಎಂದಿದ್ದಾರೆ.

ಇದಾದ ಬಳಿಕ ಇಬ್ಬರನ್ನೂ ಬಿಗ್‌ ಬಾಸ್‌ ಕನ್ಫೆಶನ್‌ ಕೊಠಡಿಗೆ ಕರೆದು ಚರ್ಚಿಸಿದ್ದಾರೆ. ಆದರೆ ಈ ವೇಳೆ ಇಬ್ಬರೂ ಸಮಸ್ಯೆ ಬಗೆಹರಿಸದೇ ವಿವಾದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಿರೂಪಕರ ಮುಂದೆ ಈ ವಿಚಾರವನ್ನು ಮತ್ತಷ್ಟು ಹೆಚ್ಚಿಸಬೇಡಿ ಎಂದು ಸಾಗರ್‌ ಅವರಿಗೆ ಬಿಗ್‌ ಬಾಸ್‌ ಹೇಳಿದ್ದಾರೆ.

ಮೋಹನ್‌ ಲಾಲ್‌ ಕಾರ್ಯಕ್ರಮದ ಸಿಬ್ಬಂದಿಗೆ ಈ ಲೈನ್‌ ಕಟ್‌ ಮಾಡಿ ಎಂದು ಹೇಳಿ, ಸ್ಪರ್ಧಿಗಳ ಮೇಲೆ ರೇಗಾಡಿದ್ದಾರೆ. ನಾನು ನಿಮಗೆ ಬ್ಯಾಂಡ್‌ ಕೊಡಿ ಎಂದು ಹೇಳಿದೆ ಆದರೆ ಅದನ್ನು ನೀವು ಎಸೆದಿದ್ದೀರಿ. ಇದರಿಂದ ನನಗೆ ಅಗೌರವವಾಯಿತು. ನಿಮ್ಮೆಲ್ಲರೊಂದಿಗೆ ಈಸ್ಟರ್ ಆಚರಿಸಲು ನಾನು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ. ನಾನು ಜೈಸಲ್ಮೇರ್‌ನಿಂದ 4-5 ಗಂಟೆಗಳ ಪ್ರಯಾಣ ಮಾಡಿದೆ. ನಂತರ ವಿಮಾನ ಸಿಕ್ಕಿದ ಬಳಿಕ ನಾನು ಇಲ್ಲಿಗೆ ತಲುಪಿದೆ. ಈ ಘಟನೆಯಿಂದ ನನಗೆ ತುಂಬಾ ಅಸಮಾಧಾನವಾಗಿದೆ. ಆದ್ದರಿಂದ ನಾನು ಕಾರ್ಯಕ್ರಮವನ್ನು ಅರ್ಧದಲ್ಲೇ ಮುಗಿಸಿ ಹೋಗುತ್ತಿದ್ದೇನೆ ಎಂದು ಹೇಳಿ ವಾಪಾಸಾಗಿದ್ದಾರೆ.

Advertisement

ಮೋಹನ್‌ ಲಾಲ್‌ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲು ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next