Advertisement

BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು

08:52 PM Sep 29, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11) ದೊಡ್ಮನೆಗೆ ಆರು ಸ್ಪರ್ಧಿಗಳು ಹೋಗಿದ್ದಾರೆ.

Advertisement

5 ಹಾಗೂ 6ನೇ ಸ್ಪರ್ಧಿಯಾಗಿ ನಟಿ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಎಂಟ್ರಿ ಆಗಿದ್ದಾರೆ.

ಸ್ಪರ್ಧಿಗಳು ಎಂಟ್ರಿ ಆಗುತ್ತಿದ್ದಂತೆ ದೊಡ್ಮನೆಯೊಳಗೆ ಇರುವವರು ಪರಸ್ಪರ ಸ್ನೇಹಿತರಾಗಿ ಪರಿಚಯವಾಗುತ್ತಿದ್ದಾರೆ.

ಇದೀಗ 8ನೇ ಹಾಗೂ 9ನೇ ಸ್ಪರ್ಧಿ ದೊಡ್ಮನೆ ಅಖಾಡಕ್ಕೆ ಬಂದಿದ್ದಾರೆ.

ಕಿರುತೆರೆ ನಟ ಶಿಶಿರ್ ಶಾಸ್ತ್ರಿ:
ಕಳೆದ‌ 13 ವರ್ಷಗಳಿಂದ ಕಿರುತೆರೆ ನಟನಾಗಿ ಶಿಶಿರ್ ಶಾಸ್ತ್ರಿ ಗುರುತಿಸಿಕೊಂಡಿದ್ದಾರೆ.

Advertisement

‘ಸೇವಂತಿ’ ಧಾರಾವಾಹಿ ಸೇರಿದಂತೆ ಆಗಿ ತೆಲುಗು ಕಿರುತೆರೆಯಲೂ ಅವರು ಮಿಂಚಿದ್ದಾರೆ. ಕನ್ನಡದ ‘ಕುಲವಧು’ ಹುಡುಗ ಶಿಶಿರ್ ಶಾಸ್ತ್ರಿ, ಜೀ ತೆಲುಗು ವಾಹಿನಿಯ ‘ಇಂತಿಗುಟ್ಟು’ ಧಾರಾವಾಹಿಯಲ್ಲೂ ನಟಿಸಿದ್ದಾರೆ.

ನಟ ತಿವಿಕ್ರಮ್:
ಶಿಶಿರ್ ಜತೆಗೆ ನಟ ತಿವಿಕ್ರಮ್ ಕೂಡ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಕಿರುತೆರೆ ಹಾಗೂ ಸಿನಿಮಾರಂಗ ಎರಡರಲ್ಲೂ ತಿವಿಕ್ರಮ್ ಮಿಂಚಿದ್ದಾರೆ.

‘ಪದ್ಮಾವತಿ’ ಧಾರಾವಾಹಿ ಮೂಲಕ ‘ಸಾಮ್ರಾಟ್’ ಆಗಿ ಅವರು ಮಿಂಚಿದ್ದಾರೆ.

ಮೊದಲು ಕ್ರಿಕೆಟ್ ಆಟಗಾರರಾಗಿದ್ದ ಇವರು,  ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಸಿಸಿಎಲ್ ನಲ್ಲಿ ಅವರು ಆಡಿದ್ದಾರೆ.

ನವರಾತ್ರಿ, ಪ್ರೇಮ ಬರಹ, ಸಕೂಚಿ, ರಂಗನಾಯಕಿ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.

ಶಿಶಿರ್ ಅವರು ನರಕಕ್ಕೆ ಹೋಗಿದ್ದಾರೆ. ಸ್ವರ್ಗದ ಮನೆಗೆ ತಿವಿಕ್ರಮ್ ಅವರು ಹೋಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next