Advertisement

BBK10: ಬಿಗ್ ಬಾಸ್ ಫಿನಾಲೆಯಿಂದ ತುಕಾಲಿ ಸಂತೋಷ್ ಔಟ್:‌ ಭಾವುಕರಾದ ವರ್ತೂರು

11:35 PM Jan 27, 2024 | Team Udayavani |

ಬೆಂಗಳೂರು: ವಿಗ್ ಬಾಸ್ ಕನ್ನಡ ಸೀಸನ್ 10 ಅದ್ಧೂರಿ ಫಿನಾಲೆಯ ಆರು ಜನರ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಆ ಮೂಲಕ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

Advertisement

ದೊಡ್ಮನೆಯಲ್ಲಿ ಹತ್ತಾರು ಸವಾಲು ಸಂಕಷ್ಟಗಳನ್ನು ಎದುರಿಸಿಕೊಂಡು 113 ದಿನಗಳವರೆಗೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ , ವಿನಯ್ ಹಾಗೂ ಪ್ರತಾಪ್ ಫಿನಾಲೆವರೆಗೆ ಬಂದಿದ್ದರು. ಇದೀಗ ಇವರಲ್ಲಿ ಒಬ್ಬರು ಅಂತಿಮ ಹಂತದಲ್ಲಿ ಮನೆಯಿಂದ ಹೊರ ಬಂದಿದ್ದು, ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.

ಮನೆಯಲ್ಲಿನ ಸದಸ್ಯರು ಹಾಗೂ ಮನೆಯಿಂದ ಹೊರ ಬಂದಿರುವ ಸದಸ್ಯರಲ್ಲಿ ಯಾರು ಮನೆಯಿಂದ ಹೊರಬೇಕೆಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಇದರಲ್ಲಿ ಬಹುತೇಕರು ತುಕಾಲಿ ಸಂತೋಷ್ ಅವರ ಹೆಸರನ್ನು ಹೇಳಿದ್ದಾರೆ.

ಇಷ್ಟು ದಿನ ಮನೆಯಲ್ಲಿ ನಕ್ಕು ನಗಿಸಿ ಮನರಂಜನೆ ನೀಡಿದ ತುಕಾಲಿ ಸಂತೋಷ್ ಫಿನಾಲೆ ಸ್ಪರ್ಧೆಗಳಲ್ಲಿ ಮೊದಲನೇಯ ಅವರಾಗಿ ಮನೆಯಿಂದ ಆಚೆ ಬಂದಿದ್ದಾರೆ.

ವೋಟಿನ ಲೆಕ್ಕಾಚಾರದಲ್ಲಿ ತುಕಾಲಿ ಅವರಿಗೆ ಕಡಿಮೆ ಮತ ಸಿಕ್ಕಿದ್ದು, ಆ ನಿಟ್ಟಿನಲ್ಲಿ ತುಕಾಲಿ ಅವರು ಮನೆಯಿಂದ ಹೊರಬಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next