Advertisement

ನಾಲ್ವರು ಗುಜರಾತಿಗಳಿಂದ ಆಧುನಿಕ ಭಾರತಕ್ಕೆ ದೊಡ್ಡ ಕೊಡುಗೆ: ಶಾ

09:20 PM May 19, 2023 | Team Udayavani |

ನವದೆಹಲಿ: ನಾಲ್ವರು ಗುಜರಾತಿಗಳಾದ ಮಹಾತ್ಮ ಗಾಂಧಿ, ಸರ್ದಾರ್‌ ವಲ್ಲಭಬಾಯಿ ಪಟೇಲ್‌, ಮೊರಾರ್ಜಿ ದೇಸಾಯಿ ಮತ್ತು ನರೇಂದ್ರ ಮೋದಿ ಆಧುನಿಕ ಭಾರತಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಶ್ರೀ ದೆಹಲಿ ಗುಜರಾತಿ ಸಮಾಜವು ಆರಂಭವಾಗಿ 125ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಮಹಾತ್ಮ ಗಾಂಧಿಯವರ ಪರಿಶ್ರಮದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಸರ್ದಾರ್‌ ಪಟೇಲ್‌ ಅವರ ಕಾರಣದಿಂದಾಗಿ ದೇಶ ಒಗ್ಗೂಡಿತು. ಮೊರಾರ್ಜಿ ದೇಸಾಯಿ ಅವರಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಪುನಶ್ಚೇತನಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ವಿಶ್ವಾದ್ಯಂತ ಭಾರತವನ್ನು ಸಂಭ್ರಮಿಸಲಾಗುತ್ತಿದೆ,” ಎಂದು ಬಣ್ಣಿಸಿದ್ದಾರೆ.

“ದೇಶ ಮತ್ತು ವಿಶ್ವಾದ್ಯಂತ ಎಲ್ಲಾ ಭಾಗಗಳಲ್ಲಿ ಗುಜರಾತಿ ಸಮುದಾಯವು ನೆಲೆಸಿದೆ. ಎಲ್ಲಾ ಸಮಾಜದೊಂದಿಗೆ ಸಹಬಾಳ್ವೆ ಹೊಂದಿದ್ದು, ಸಮಾಜದ ಸೇವೆಯಲ್ಲಿ ತೊಡಗಿದೆ” ಎಂದು ಅಮಿತ್‌ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next