Advertisement

ಕ್ವಾರಂಟೈನ್‌ ಮುಗಿಸಿದವರ ಸ್ಯಾಂಪಲ್‌ ಪರೀಕ್ಷೆ ಕಡ್ಡಾಯ

06:50 PM May 21, 2020 | Naveen |

ಬೀದರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕ್ವಾರಂಟೈನ್‌ನಲ್ಲಿ 12ರಿಂದ 14 ದಿನಗಳನ್ನು ಮುಗಿಸಿದ ಎಲ್ಲರ ಗಂಟಲು, ಮೂಗಿನ ದ್ರವದ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲು ಎತಾಲೂಕು ಆರೋಗ್ಯಾಧಿಕಾರಿಗಳು ತುರ್ತಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ನುರಿತ ಲ್ಯಾಬ್‌ ಸಿಬ್ಬಂದಿ ಕ್ವಾರಂಟೈನ್‌ನಲ್ಲಿರುವ ಜನರ ಗಂಟಲು ದ್ರವದ ಮಾದರಿ ತೆಗೆದುಕೊಳ್ಳಬೇಕು. ಇದಕ್ಕೆ ಕ್ವಾರಂಟೈನ್‌ನಲ್ಲಿರುವವರು ಸಹಕಾರ ನೀಡದೇ ಹೋದರೆ ಕಾಯ್ದೆ ಅನುಸಾರ ಜೈಲು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಬೇಕು. ಮಹಾರಾಷ್ಟ್ರದಿಂದ ಬಂದಿರುವವರ ಗಂಟಲು ದ್ರವವನ್ನು ವಿಶೇಷ ನಿಗಾವಹಿಸಿ ಪಡೆದು ಪರೀಕ್ಷೆಗೆ ಕಳುಹಿಸಬೇಕು. ಜಿಲ್ಲಾದ್ಯಂತ ಎಲ್ಲ ಕಡೆಗಳಲ್ಲಿ ಈ ಕಾರ್ಯ ನಡೆಯಲು ವಾಹನಗಳ ಕೊರತೆಯಾದಲ್ಲಿ ಬಾಡಿಗೆ ವಾಹನಗಳನ್ನು ಪಡೆದುಕೊಂಡು ಕೆಲಸ ತೀವ್ರಗೊಳಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next