Advertisement

Bidar: 500 ರೂ. ಲಂಚ‌ ಪಡೆದಿದ್ದ ಎಸ್.ಡಿಸಿಗೆ ಜೈಲು‌ ಶಿಕ್ಷೆ

04:35 PM Aug 01, 2024 | Team Udayavani |

ಬೀದರ್: ಧನ ಸಹಾಯ ಮಂಜೂರಾತಿಗಾಗಿ 500 ರೂಪಾಯಿ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ‌ ಬಿದ್ದಿದ್ದ ಬಸವಕಲ್ಯಾಣ ತಹಶೀಲ್ದಾರ್ ಕಚೇರಿಯ ಎಸ್.ಡಿಸಿಗೆ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಗುರುವಾರ ಶಿಕ್ಷೆ ಮತ್ತು‌ ದಂಡ ವಿಧಿಸಿದೆ.

Advertisement

ಜಯಶ್ರೀ ಬಸವರಾಜ ಶಿಕ್ಷೆಗೆ ಒಳಗಾದ ಎಸ್.ಡಿಸಿ ಬಸವಕಲ್ಯಾಣ ತಾಲೂಕಿನ ಬೋಸಗಿ ಗ್ರಾಮದ‌ ಲಲಿತಾಬಾಯಿ ಪುರುಷೋತ್ತಮ ಎಂಬುವರಿಗೆ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ 10 ಸಾವಿರ ರೂಪಾಯಿ‌ ಧನ ಸಹಾಯ ಮಂಜೂರು ಮಾಡಿಸಿ ಚೆಕ್‌ ನೀಡಲು ಎಸ್.ಡಿಸಿ‌ ಜಯಶ್ರೀ ಬಸವರಾಜ ಲಂಚದ ಬೇಡಿಕೆ ಇಟ್ಟಿದ್ದರು. 2023ರ ಜ. 1 ರಂದು 500 ರೂ. ಲಂಚ ಸ್ವೀಕರಿಸುವಾಗ ಲೋಕಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದರು.

ಅಂದಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆರ್.ಎಸ್‌ ಜಾಗೀರದಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ‌ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರಾದ ವಿಜಯಕುಮಾರ ಆನಂದಶೆಟ್ಟಿ ಜಯಶ್ರೀ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಲಂಚ ನಿಷೇಧ ಕಾಯ್ದೆ ಕಲಂ 13 (2)ಕ್ಕೆ ಒಂದು ವರ್ಷ ಜೈಲು‌ ಶಿಕ್ಷೆ ಜತೆಗೆ 5 ಸಾವಿರ‌ ದಂಡ ಹಾಗೂ ಕಲಂ 7ರಡಿ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ‌ ರೂ. ದಂಡ. ದಂಡ ವಿಧಿಸಲು ತಪ್ಪಿದರೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ವಿಶೇಷ ಸರ್ಕಾರಿ ಅಭಿಯೊಜಕ ಕೇಶವರಾವ್ ಶ್ರೀಮಾಳೆ‌ ಅವರು ಲೋಕಾಯುಕ್ತ ಪೊಲೀಸರ ಪರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next