Advertisement

ಕೋವಿಡ್ : ಕೊಳ್ಳೂರ 11 ಲಕ್ಷ ರೂ. ದೇಣಿಗೆ

11:46 AM Apr 27, 2020 | Naveen |

ಬೀದರ: ದೇಶಾದ್ಯಂತ ಕೋವಿಡ್ ವೈರಸ್‌ ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರದಿಂದ ನಡೆಯುತ್ತಿರುವ ಜನರ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಕೈಗೊಳ್ಳುತ್ತಿರುವ ವಿವಿಧ ಪರಿಹಾರ ಕಾರ್ಯಕ್ರಮಗಳಿಗಾಗಿ ನಗರದ ಪ್ರತಿಷ್ಠಿತ ಜಿಕೆ ಕನ್ಸ್‌ಟ್ರಕ್ಶನ್‌ ಕಂಪನಿ ಸಂಸ್ಥಾಪಕ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ವೈಯಕ್ತಿಕವಾಗಿ 11 ಲಕ್ಷ ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಬಸವಣ್ಣನವರ ಜಯಂತ್ಯುತ್ಸವ ಸಂದರ್ಭದಲ್ಲಿ ಕೊಳ್ಳೂರ ಪಿಎಂ ಕೇರ್ಸ್‌ ನಿಧಿಗೆ 5.55 ಲಕ್ಷ ರೂ. ಹಾಗೂ ಕರ್ನಾಟಕ ಸಿಎಂ ಕೋವಿಡ್‌- 19 ಪರಿಹಾರ ನಿಧಿಗೆ ದೇಣಿಗೆ ನೀಡಿದ 5.55 ಲಕ್ಷ ರೂ. ಚೆಕ್‌ಗಳನ್ನು ರವಿವಾರ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅವರಿಗೆ ಸಲ್ಲಿಸಿದರು. ಕೊರೊನಾ ಸೃಷ್ಟಿಸಿರುವ ಸಂದಿಗ್ಧ ಪರಿಸ್ಥಿತಿ ಮತ್ತು ವಿಪತ್ತಿನ ಸವಾಲು ಎದುರಿಸಲು ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಕೋವಿಡ್‌-19 ಪರಿಹಾರ ನಿಧಿ ಮೂಲಕ ನಾಗರಿಕರಿಂದ ನೆರವು ಕೋರಿದ್ದಾರೆ. ಇದಕ್ಕೆ ಸ್ಪಂದಿಸುವ ಮೂಲಕ ಕೊಳ್ಳೂರ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜಿಲ್ಲೆಯಿಂದ ಈವರೆಗೆ ವೈಯಕ್ತಿಕವಾಗಿ ನೀಡಿದ ಅತ್ಯಧಿಕ ಪರಿಹಾರ ಮೊತ್ತ ಇದಾಗಿರುವುದು

ವಿಶೇಷ ಕೋವಿಡ್ ಸೋಂಕು ಎಲ್ಲೆಡೆ ತಲ್ಲಣ  ಸೃಷ್ಟಿಸಿದೆ. ಲಾಕ್‌ಡೌನ್‌ನಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಬದುಕು ಸಾಗಿಸುವುದು ದುಸ್ತರವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಷ್ಟದಲ್ಲಿದ್ದವರ ನೆರವಿಗೆ ಬರುವುದು ಪ್ರತಿಯೊಬ್ಬರ ಧರ್ಮವಾಗಿದೆ. ವಿಶ್ವಕ್ಕೆ ಮೊದಲ ಬಾರಿ ಮಹಾತ್ಮ ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವ ನೀಡಿದರು. ಅವರ ಜಯಂತಿ ಸಂದರ್ಭದಲ್ಲಿ ಕೋವಿಡ್ ಪರಿಹಾರ ನಿಧಿಗೆ ಹಣ ನೀಡಿ ಅಳಿಲು
ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಉಳ್ಳವರು ಬಡವರನ್ನು ಗುರುತಿಸಿ ನೆರವಿಗೆ ಬಂದರೆ ಎಲ್ಲರೂ ಸಂಕಷ್ಟದಿಂದ ಪಾರಾಗಬಲ್ಲರು ಎಂದು ಗುರುನಾಥ ಕೊಳ್ಳೂರ ಹೇಳಿದ್ದಾರೆ.

ಸಂಸದ ಭಗವಂತ ಖೂಬಾ, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ಡಿ.ಎಲ್‌. ನಾಗೇಶ, ಎಡಿಸಿ ರುದ್ರೇಶ ಗಾಳಿ, ಎಸಿ ಅಕ್ಷಯ ಶ್ರೀಧರ, ಜಿಕೆ ಕನ್ಸ್‌ಟ್ರಕ್ಶನ್‌ ಎಂಡಿ ಸಚಿನ್‌ ಕೊಳ್ಳೂರ, ಪ್ರಮುಖರಾದ ಬಾಬು ವಾಲಿ, ಬಿ.ಜಿ. ಶೆಟಕಾರ್‌, ಚಂದ್ರಶೇಖರ ಪಾಟೀಲ ಗಾದಗಿ, ಹಣಮಂತ ಬುಳ್ಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next