Advertisement

ಭಾಯಂದರ್‌ ಶ್ರೀ ಹನುಮಾನ್‌ ಭಜನ ಮಂಡಳಿ: ಪ್ರತಿಭಾ ಪುರಸ್ಕಾರ 

03:49 PM Mar 22, 2018 | |

ಮುಂಬಯಿ: ಭಾಯಂದರ್‌ ಪೂರ್ವದ ಶ್ರೀ ಹನುಮಾನ್‌ ಭಜನ ಮಂಡಳಿ ಮತ್ತು ಶ್ರೀ ಮಣಿಕಂಠ ಸೇವಾ ಸಂಘದ ಮಹಿಳಾ ವಿಭಾಗದ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ಮಾ. 11ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಶ್ರೀ ಹನುಮಾನ್‌ ಭಜನ ಮಂಡಳಿ ಮತ್ತು ಶ್ರೀ ಮಣಿಕಂಠ ಸೇವಾ ಸಂಘದ ಅಧ್ಯಕ್ಷ ಜಯರಾಮ ಎಂ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಲ್ಲದೆ ಶೀಘ್ರದಲ್ಲೆ ತೆರೆಕಾಣಲಿರುವ ಗಂಧದ ಕುಡಿ ಚಿತ್ರದ ಬಾಲಕಲಾವಿದೆ ಕು| ನಿಧಿ ಸಂಜೀವ ಶೆಟ್ಟಿ ಇವರನ್ನು ಪ್ರತಿಭಾ ರತ್ನ ಬಿರುದಿನೊಂದಿಗೆ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಧರ ಶೆಟ್ಟಿ ಇವರನ್ನು ಭಜನ ಕಲಾ ವಲ್ಲಭ ಎಂಬ ಬಿರುದು ಪ್ರದಾನಿಸಿ ಸಮ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅತಿಥಿಗಳಾಗಿ ರೇಷ್ಮಾ ರವಿರಾಜ್‌, ಸಮಾಜ ರತ್ನ ಲಯನ್‌ ಶಂಕರ್‌ ಕೆ. ಟಿ., ಅಧ್ಯಕ್ಷ ಜಯರಾಮ್‌ ಎಂ. ಶೆಟ್ಟಿ, ಉಪಾಧ್ಯಕ್ಷ ಸುಕೇಶ್‌ ಶೆಟ್ಟಿ ಕಲತ್ತೂರು, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೆ. ಕೋಟ್ಯಾನ್‌, ಕೋಶಾಧಿಕಾರಿ ಸುಕುಮಾರ್‌ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎಸ್‌. ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮೀ ಎಸ್‌. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಬಾಬಾ ಪ್ರಸಾದ್‌ ಕುತ್ಯಾರ್‌ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮೀ ಎಸ್‌. ಸುವರ್ಣ ವಂದಿಸಿದರು. ಮಂಡಳಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ವಿನೋದಾವಳಿಗಳು ಪ್ರದರ್ಶನ ಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next