Advertisement
ಅವರು ಭೈರಂಜೆ ಶ್ರೀ ಭವಾನೀ ಶಂಕರ ದೇವಸ್ಥಾನದಲ್ಲಿ ಫೆ. 3ರಿಂದ ಆರಂಭಗೊಂಡು 10ರ ವರೆಗೆ ನಡೆದ ಅಷ್ಟಬಂಧಸಹಿತ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ಜರಗಿದ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು.
ದೇವಸ್ಥಾನದ ಕಾರ್ಯಾಧ್ಯಕ್ಷ ಗೋವರ್ಧನ ದಾಸ್ ಹೆಗ್ಡೆ, ಉದ್ಯಮಿ ಶಿವಪ್ರಸಾದ್ ಹೆಗ್ಡೆ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವೇಂದ್ರ ವಾಗೆÛ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ನಾಯಕ್ ಆತ್ರಾಡಿ, ಡಾ| ಪಾದೆಕಲ್ಲು ವಿಷ್ಣು ಭಟ್ಟ, ಕೊಡಿಬೆಟ್ಟು ಗ್ರಾ.ಪಂ. ಅಧ್ಯಕ್ಷ ರಾಜು ಪೂಜಾರಿ, ಅನಂತ ಪದ್ಮನಾಭ ನಾಯಕ್, ಕ್ಷೇತ್ರದ ಪ್ರಧಾನ ತಂತ್ರಿ ಯಫìಲೆ ಸುಬ್ರಹ್ಮಣ್ಯ ಕೃಷ್ಣ ಪರಾಡ್ಕರ್, ವಿಷ್ಣು ತೆಂಡುಲ್ಕರ್, ರವೀಂದ್ರ ನಾಯಕ್, ಹರಿದಾಸ ಕಾಮತ್, ಅಪ್ಪಿ ನಾಯ್ಕ, ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಧಿಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಪ್ರಭು ಪ್ರಸ್ತಾವನೆಗೈದರು. ದೇವೇಂದ್ರ ಸ್ವಾಗತಿಸಿ, ರವೀಂದ್ರ ನಾಯಕ್, ದಿನೇಶ್, ಎಚ್.ಎನ್. ನಟರಾಜ್ ಕಾರ್ಯಕ್ರಮ ನಿರೂಪಿಸಿ, ಚಂದ್ರಶೇಖರ ನಾಯ್ಕ ವಂದಿಸಿದರು.
Related Articles
Advertisement