Advertisement

ಭಟ್ಕಳ: ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ

10:19 PM Jul 31, 2022 | Team Udayavani |

ಭಟ್ಕಳ: ರಾಜ್ಯ ಸರಕಾರದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಇಲ್ಲಿನ ಹನುಮಾನ್ ನಗರದ ಗೋವಿಂದ ನಾಯ್ಕ ಅವರು ಭಟ್ಕಳಕ್ಕೆ ಬರುತ್ತಲೇ ಅದ್ದೂರಿ ಸ್ವಾಗತ ನೀಡಲಾಯಿತು.

Advertisement

ಗೊರಟೆ ಗಡಿಯಲ್ಲಿಯೇ ನೂರಾರು ಕಾರ್ಯಕರ್ತರು ಹೂ ಹಾರ ಹಾಕಿ ಅವರನ್ನು ಬೈಕ್ ರ‍್ಯಾಲಿಯ ಮೂಲಕ ಭಟ್ಕಳಕ್ಕೆ ಕರೆ ತಂದು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ನಂತರ ಬೈಕ್ ರ‍್ಯಾಲಿಯ ಮೂಲಕ ಸರ್ಕಲ್ ತಲುಪುತ್ತಲೇ ಕಾರ್ಯಕರ್ತರ ಹರ್ಷೋದ್ಘಾರದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಹಳ ವರ್ಷಗಳ ಕಾಲ ಹಿಂದುತ್ವಕ್ಕಾಗಿಯೇ ತಮ್ಮ ಹೋರಾಟವನ್ನು ನಡೆಸಿಕೊಂಡು ಬಂದಿದ್ದ ಗೋವಿಂದ ನಾಯ್ಕ ಅವರನ್ನು ಸ್ವಾಗತಿಸಿದ ಕಾರ್ಯಕರ್ತರಲ್ಲಿ ಹೊಸ ಹುರುಪು ಕಾಣುತ್ತಿತ್ತು. ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಬಂದ ಓರ್ವ ಶಾಸಕರನ್ನು ಸ್ವಾಗತಿಸುವ ರೀತಿಯಲ್ಲಿ ಸ್ವಾಗತಿಸಿದ್ದು ಮಾತ್ರ ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next