Advertisement

ಭಾರತ್ ಬಂದ್ : ಹಾವೇರಿ, ರಾಮನಗರ, ದಾವಣಗೆರೆಯಲ್ಲಿ ನೀರಸ ಪ್ರತಿಕ್ರೀಯೆ

10:53 AM Dec 08, 2020 | sudhir |

ಹಾವೇರಿ/ರಾಮನಗರ/ದಾವಣಗೆರೆ : ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾವೇರಿ, ರಾಮನಗರ ಹಾಗೂ ದಾವಣಗೆರೆಯಲ್ಲಿ ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ.

Advertisement

ರಾಮನಗರದಲ್ಲೂ ಬಂದ್ ಗೆ ನಿರಸ ಪ್ರತಿಕ್ರಿಯೆ:
ರಾಮನಗರದಲ್ಲಿ ವಾಹನ‌ ಸಂಚಾರ ಎಂದಿನಂತಿದ್ದು. ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಣೆ ನಡೆಸುತ್ತಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬಸ್, ಆಟೋ ಸಂಚಾರಕ್ಕೆ ಬಾಧಕವಿಲ್ಲ. ಅಲ್ಲಲ್ಲಿ ರೈತರ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ದಾವಣಗೆರೆ ಅಲ್ಲಲ್ಲಿ ಪ್ರತಿಭಟನೆ :
ದಾವಣಗೆರೆಯಲ್ಲಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಸಿಪಿಐ ಇತರೆ ಸಂಘಟನೆ ಕಾರ್ಯಕರ್ತರು ಅಲ್ಲಲ್ಲಿ ಪ್ರತಿಭಟನೆ ನಡೆಸಿದರು. ಜನ ಜೀವನ ಎಂದಿನಂತೆ ಸಾಮಾನ್ಯವಾಗಿತ್ತು.

Advertisement

 

ಹಾವೇರಿಯಲ್ಲಿ ಜನತೆಗೆ ತಟ್ಟದ ಬಂದ್ ಬಿಸಿ:
ಜಿಲ್ಲೆಯಲ್ಲಿ ಎಂದಿನಂತೆ ಅಟೋ, ಬಸ್ ಸಂಚಾರ ನಡೆಸುತ್ತಿದ್ದು, ಅಂಗಡಿ ಹೋಟೆಲ್‌ಗಳು ತೆರೆದಿವೆ. 11 ಗಂಟೆಯ ನಂತರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next