Advertisement

ತಿರುವನಂತಪುರ: ಶಿವಗಿರಿ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ

09:12 PM Sep 14, 2022 | Team Udayavani |

ತಿರುವನಂತಪುರ: ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯಲ್ಲಿರುವ ಸಂಸದ ರಾಹುಲ್‌ ಗಾಂಧಿ ಬುಧವಾರ ಬೆಳಗ್ಗೆ ಕೇರಳದ ತಿರುವನಂತಪುರಂನಲ್ಲಿರುವ ಶಿವಗಿರಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿ ಧಾರ್ಮಿಕ ಗುರು ನಾರಾಯಣ ಗುರುಗಳ ಸಮಾಧಿಗೆ ನಮಸ್ಕರಿಸಿ, ಮಠದ ಸಾಧು, ಸಂತರ ಆಶೀರ್ವಾದ ಪಡೆದು, ರಾಜ್ಯದಲ್ಲಿ ನಾಲ್ಕನೇ ದಿನದ ಯಾತ್ರೆಯನ್ನು ಆರಂಭಿಸಿದರು.

Advertisement

ಈ ವಿಚಾರವಾಗಿ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ನಾರಾಯಣ ಗುರುಗಳು ಅತ್ಯಂತ ಶ್ರೇಷ್ಠ ಧಾರ್ಮಿಕ ಗುರುವಾಗಿದ್ದು, ಮಹಾತ್ಮಾ ಗಾಂಧಿ ಸೇರಿ ಅನೇಕ ಪ್ರಮುಖ ನಾಯಕರ ಜೀವನದಲ್ಲಿ ದೊಡ್ಡ ಪ್ರಭಾವ ಬೀರಿದ್ದರು’ ಎಂದು ಬರೆದುಕೊಂಡಿದ್ದಾರೆ.

ಬುಧವಾರ ತಿರುವನಂತಪುರಂ ಜಿಲ್ಲೆಯ ನವೈಕುಲಂ ಜಂಕ್ಷನ್‌ ಇಂದ ಬೆಳಗ್ಗೆ 7.30ಕ್ಕೆ ಆರಂಭವಾದ ಯಾತ್ರೆಯು ಸಂಜೆ ಕೊಲ್ಲಂ ಜಿಲ್ಲೆಯ ಪಲ್ಲಿಮುಕ್ಕು ಜಂಕ್ಷನ್‌ ಅಲ್ಲಿ ಮುಕ್ತಾಯವಾಗಿದೆ. ಅಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯು ದೇಶದ 12 ರಾಜ್ಯಗಳಲ್ಲಿ ಒಟ್ಟು 3,570 ಕಿ.ಮೀ. ದೂರ ಸಂಚರಿಸಿ, ಜಮ್ಮು ಮತ್ತು ಕಾಶ್ಮೀರ ತಲುಪಲಿದೆ. 150 ದಿನಗಳ ಯಾತ್ರೆ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next