Advertisement

ಭಾರತ್‌ ಜೋಡೋ ಯಾತ್ರೆ; ಮೀನುಗಾರರೊಂದಿಗೆ ರಾಹುಲ್‌ ಸಂವಾದ

10:32 PM Sep 19, 2022 | Team Udayavani |

ಅಳಪ್ಪುಳ: ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆಯ 12ನೇ ದಿನವಾದ ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳದ ಅಳಪ್ಪುದ ವಡಕ್ಕಲ್‌ ಬೀಚ್‌ನಲ್ಲಿ ಬೆಸ್ತ ಸಮುದಾಯದ ಸಂಕಷ್ಟಗಳನ್ನು ಆಲಿಸಿದರು.

Advertisement

ಇಂಧನ ಬೆಲೆ ಏರಿಕೆ, ಸಬ್ಸಿಡಿ ಕಡಿತ, ಕ್ಷೀಣಿಸುತ್ತಿರುವ ಮೀನುಗಳ ಸಂಖ್ಯೆ, ಪಿಂಚಣಿ ಬಾರದಿರುವುದು, ಅಸಮರ್ಪಕ ಶೈಕ್ಷಣಿಕ ಅವಕಾಶಗಳು, ಪರಿಸರ ಹಾನಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಮೀನುಗಾರರೊಂದಿಗೆ ರಾಹುಲ್‌ ಗಾಂಧಿ ಸೋಮವಾರ ಸಂವಾದ ನಡೆಸಿದರು.

ಅಳಪ್ಪುಳದಲ್ಲಿ ಆರಂಭವಾದ 12ನೇ ದಿನದ ಯಾತ್ರೆ ಕಲವೂರ್‌ನಲ್ಲಿ ಮುಕ್ತಾಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next