Advertisement

ಭಾರತ್ ಜೋಡೋ ಯಾತ್ರೆಗೂ 2024ರ ಚುನಾವಣೆಗೂ ಸಂಬಂಧವಿಲ್ಲ: ಜೈರಾಮ್ ರಮೇಶ್

05:11 PM Jan 07, 2023 | Team Udayavani |

ಕರ್ನಾಲ್ (ಹರಿಯಾಣ): 2024 ರ ಸಾರ್ವತ್ರಿಕ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ‘ಭಾರತ್ ಜೋಡೋ ಯಾತ್ರೆ’ ಕಸರತ್ತು ಅಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶನಿವಾರ ಹೇಳಿದ್ದಾರೆ.

Advertisement

ಭಾರತ್ ಜೋಡೋ ಯಾತ್ರೆಗೂ 2024 ರ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಮತ್ತು ವಿಭಜನೆಯ ರಾಜಕೀಯವನ್ನು ಕೊನೆಗೊಳಿಸಲು ನಡೆಸಲಾಗುತ್ತಿದೆ ಎಂದರು.

ಇದು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಾಗಿದ್ದು, ಇಡೀ ಪಕ್ಷ ಇದರಲ್ಲಿ ಭಾಗಿಯಾಗಿದೆ. ಪಾದಯಾತ್ರೆಯು ಒಬ್ಬ ವ್ಯಕ್ತಿಯನ್ನು ಪ್ರಧಾನಮಂತ್ರಿ ಎಂದು ಬಿಂಬಿಸಲು ಅಲ್ಲ, ಆದರೆ ಸೈದ್ಧಾಂತಿಕವಾಗಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಎದುರಿಸಲು. ರಾಷ್ಟ್ರದ ಗಮನವು ರಾಹುಲ್ ಗಾಂಧಿಯತ್ತ ಸೆಳೆಯಲ್ಪಟ್ಟಿದೆ ಏಕೆಂದರೆ ಅವರು ಯಾತ್ರೆಯ ಅತ್ಯಂತ ಗೋಚರಿಸುವ ಪ್ರಮುಖ ಮತ್ತು ಕ್ರಿಯಾತ್ಮಕ ಮುಖವಾಗಿದ್ದಾರೆ. ಈ ಯಾತ್ರೆಯು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಸಂಘಟನೆಯನ್ನು ಬಲಪಡಿಸಲು ಮತ್ತು ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಲು ಎಂದು ಹೇಳಿದರು.

ಪ್ರಸ್ತುತ ಹರಿಯಾಣದ ಕರ್ನಾಲ್ ಮೂಲಕ ಸಾಗುತ್ತಿರುವ ಕನ್ಯಾಕುಮಾರಿ ಟು ಕಾಶ್ಮೀರ ಪಾದಯಾತ್ರೆ ಚುನಾವಣಾ ಯಾತ್ರೆಯಲ್ಲ ಎಂದು ಪ್ರತಿಪಾದಿಸಿದರು.

ಮುಂದಿನ ಮೂರು ದಿನಗಳಲ್ಲಿ ಯಾತ್ರೆಯು ಜ. 11 ರಂದು ಪಂಜಾಬ್‌ಗೆ ಪ್ರವೇಶಿಸುವ ಮೊದಲು ಕರ್ನಾಲ್, ಕುರುಕ್ಷೇತ್ರ ಮತ್ತು ಅಂಬಾಲಾ ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next