Advertisement

Tragedy: ಪ್ರಿಯತಮೆ ಮೇಲೆ ಮಚ್ಚು ಬೀಸಿದ ಪ್ರಿಯಕರ… ಆರೋಪಿಗಾಗಿ ಪೊಲೀಸರಿಂದ ಹುಡುಕಾಟ

10:43 AM Jan 30, 2024 | Team Udayavani |

ಭರಮಸಾಗರ: ಪ್ರೀತಿಸಿದ ಹುಡುಗಿಯನ್ನೇ ಪ್ರೀಯತಮ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ಸಮೀಪದ ಸುಲ್ತಾನಿಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

Advertisement

ಸಮೀನಾ(25) ಎಂಬಾಕೆಯೇ ಹತ್ಯೆ ಯತ್ನಕ್ಕೆ ತುತ್ತಾದ ಯುವತಿ. ಸುಲ್ತಾನಿಪುರ ಗ್ರಾಮದ ದಾದಾಪೀರ್ ಮತ್ತು ಸಮೀನಾ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಸಲುಗೆ ನಡುವೆ ಅಗಾಗ್ಗೆ ಗಲಾಟೆಗಳು ನಡೆಯುತ್ತಿತ್ತು. ಕಳೆದ ರಾತ್ರಿ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ಆರೋಪಿ ಸಮೀನಾಳ ಕತ್ತು ಕೊಯ್ದು ಕೊಲೆ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ತೀವ್ರ ಗಾಯಾಳುವಾಗಿರುವ ಸಮೀನಾಳನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಯತ್ನ ಬಳಿಕ ತಲೆಮರೆಸಿಕೊಂಡಿರುವ ದಾದಾಪೀರ್ ಗಾಗಿ ಭರಮಸಾಗರ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Mayor Election: ಚಂಡೀಗಢದಲ್ಲಿ ಬಿಜೆಪಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ

Advertisement

Udayavani is now on Telegram. Click here to join our channel and stay updated with the latest news.

Next