Advertisement

ಕೆಆರ್‌ಡಿಐಎಲ್‌ ಕಾಮಗಾರಿ ಅಪೂರ್ಣಕ್ಕೆ ಆಕ್ಷೇಪ

03:27 PM Dec 06, 2019 | Naveen |

ಭಾಲ್ಕಿ: ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮೀರಾಬಾಯಿ ಜನಾರ್ದನ ಕಣಜೆ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.

Advertisement

ಸಭೆ ಆರಂಭವಾಗುತ್ತಲೇ ಸದಸ್ಯರು ಕೆಆರ್‌ಡಿಐಎಲ್‌ ಇಲಾಖೆಯ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದರು. ಕೆಆರ್‌ಡಿಐಎಲ್‌ನಿಂದ ಮೇಹಕರ್‌, ಖಟಕ್‌ ಚಿಂಚೋಳಿಯಲ್ಲಿ ನಿರ್ಮಾಣಗೊಂಡ ವಸತಿ ನಿಲಯದ ಕಟ್ಟಡಗಳನ್ನು ಹಸ್ತಾಂತರ ಮಾಡದಿರುವುದು, ತಾಲೂಕಿನ ನಾನಾ ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿರುವುದು, ಇನ್ನೂ ಕೆಲವು ಕಡೆಗಳಲ್ಲಿ ಕಟ್ಟಡ ಕಳಪೆಯಾಗಿ ನಿರ್ಮಾಣವಾಗುತ್ತಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದರು.

ಈ ವೇಳೆ ಕೆಆರ್‌ಡಿಐಎಲ್‌ನ ಅಧಿಕಾರಿ ಸಮಜಾಯಿಸಿ, ಉತ್ತರ ನೀಡುವ ಪ್ರಯತ್ನ ಮಾಡಿದರು. ಇದರಿಂದ ಗರಂ ಆದ ಹಲಬರ್ಗಾ,
ಜ್ಯಾಂತಿ, ಖಟಕ್‌ ಚಿಂಚೋಳಿ, ಮದಕಟ್ಟಿ ಕ್ಷೇತ್ರ ಸೇರಿದಂತೆ ಮುಂತಾದ ಸದಸ್ಯರು ಧ್ವನಿಗೂಡಿಸಿ, ಕೆಆರ್‌ಡಿಐಎಲ್‌ನ ಅಧಿಕಾರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಪ್ರತಿಸಲ ನಡೆಯುವ ಸಭೆಗೆ ಸರಿಯಾದ ಮಾಹಿತಿ ನೀಡುವುದಿಲ್ಲ.

ಸಭೆಯಲ್ಲಿ ಹೆಚ್ಚಾಗಿ ಗೈರಾಗಿರುವುದು ಕಂಡು ಬರುತ್ತಿದೆ. ತಾಲೂಕಿನ ನಾನಾ ಕಡೆಗಳಲ್ಲಿ ಕೆಆರ್‌ ಡಿಐಎಲ್‌ನಿಂದ ನಡೆಯುತ್ತಿರುವ ಕಾಮಗಾರಿ ತೃಪ್ತಿ ತಂದಿಲ್ಲ. ಕೆಆರ್‌ಡಿಐಎಲ್‌ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಖಟಕ್‌ ಚಿಂಚೋಳಿ ಕ್ಷೇತ್ರದ ಸದಸ್ಯ ವಿಜಯಕುಮಾರ ಗಡಗಂಚಿ ಮಾತನಾಡಿ, ಖಟಕ್‌ ಚಿಂಚೋಳಿ ಗ್ರಾಮದಲ್ಲಿ ವಸತಿ ನಿಲಯದ ಹೆಚ್ಚುವರಿ ಕೋಣೆಯನ್ನು ಕೆಆರ್‌ಡಿಐಎಲ್‌ನಿಂದ ನಿರ್ಮಿಸಿ ಮೂರು ವರ್ಷ ಕಳೆಯುತ್ತ ಬಂದರೂ ಇದುವರೆಗೂ ಹಸ್ತಾಂತರವಾಗದಿರುವ ಬಗ್ಗೆ ಪ್ರಶ್ನಿಸಿದರು. ಹಲಬರ್ಗಾ ಕ್ಷೇತ್ರದ ಸದಸ್ಯ ಸುಧಾಕರ ಮಾತನಾಡಿ, ಕೋಸಂ ಗ್ರಾಮದಲ್ಲಿ ಕೆಆರ್‌ ಡಿಐಎಲ್‌ನಿಂದ ನಿರ್ಮಿಸಿರುವ ಸಮುದಾಯ ಭವನ ಅರ್ಧಕ್ಕೆ ನಿಂತಿದೆ. ಹಾಲಹಿಪ್ಪರ್ಗಾದಲ್ಲಿ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿವೆ ಎಂದು ದೂರಿದರು.

Advertisement

ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಾರುತಿರಾವ್‌ ಮಗರ್‌, ಕಾರ್ಯನಿರ್ವಾಹಕ ಅಧಿಕಾರ ಬಸವರಾಜ ನಾಯ್ಕರ್‌ ಸೇರಿದಂತೆ ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next