Advertisement

ರಬಕವಿ-ಬನಹಟ್ಟಿ: ಭಗತ್ ಸಿಂಗ್ ಯುವ ಪೀಳಿಗೆಗೆ ಸ್ಪೂರ್ತಿ:‌ ವಿದ್ಯಾಧರ ಸವದಿ

02:56 PM Sep 28, 2022 | Team Udayavani |

ರಬಕವಿ- ಬನಹಟ್ಟಿ: ಕ್ರಾಂತಿವೀರ ಭಗತ್ ಸಿಂಗ್ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು.

Advertisement

ಅವರು ಸೆ.28ರ ಬುಧವಾರ ಬನಹಟ್ಟಿಯ ಸೋಮವಾರಪೇಟೆಯ ಭಗತ್ ಸಿಂಗ್ ಯುವಕ ಸಂಘದವರು ಹಮ್ಮಿಕೊಂಡ ಭಗತ್ ಸಿಂಗ್‌ ಅವರ 115ನೇ ಜನ್ಮದಿನೋತ್ಸವದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‌

ಭಗತ್ ಸಿಂಗರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಮ್ಮ ನಾಡಿನ ಎಲ್ಲ ಯುವಕರು ಭಗತ್ ಸಿಂಗ್‌ರ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನ ಮೈಗೂಡಿಸಿಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಹಿಂದೂ ಸಂಘಟನೆ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ಭಗತ್ ಸಿಂಗ್ ದೇಶಕ್ಕಾಗಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.  ಕೇವಲ ನನ್ನ ಶರೀರವನ್ನು ಕೊಲ್ಲಬಹುದು ಆದರೆ ನನ್ನ ಆಲೋಚನೆಯನ್ನು ಅಲ್ಲ. ಅದು ಎಂದೆಂದಿಗೂ ಚಿರಾಯು ಎಂದು ಭಗತ್‌ ಸಿಂಗ್‌ ಹೇಳಿದ್ದರು ಎಂದು ಗಾಯಕವಾಡ ತಿಳಿಸಿದರು.

ಸಮಾರಂಭದ ದಿವ್ಯ ಸಾನಿದ್ಯವನ್ನು ಬನಹಟ್ಟಿಯ ಹಿರೇಮಠದ ಶರಣ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಬ್ರಿಜ್‌ ಮೋಹನ ಡಾಗಾ, ಬಸವರಾಜ ಗಾಯಕವಾಡ, ಪ್ರಶಾಂತ ಕೊಳಕಿ, ರಾಚು ಶಿರೋಳ, ಬಸವರಾಜ ಗಾಯಕವಾಡ, ರೇವಪ್ಪ ಗುಣಕಿ, , ಭಗತಸಿಂಗ ಯುವಕ ಸಂಘದ ಆನಂದ ಜಗದಾಳ, ಮಲ್ಲು ಶಿರೋಳ, ಸುನೀಲ ಬೆಂಗೂಡಗಿ, ಸದಾಶಿವ ಪರೀಟ, ರವಿ ಸಾರವಾಡ, ಶೇಖರ ಸಾರವಾಡ, ದುಂಡಪ್ಪ ಶೇಡ್ಯಾಳ, ಸೋಮು ಬೀಳಗಿ, ಮಲ್ಲು ಮರಿಜಾಡರ, ಕಾಡು ಕೋಮಾಜಿ ಸೇರಿದಂತೆ ಅನೇಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next