Advertisement

ಹಳ್ಳಿ ಹಿನ್ನೆಲೆಯಲ್ಲಿ ಬೆಂಕಿಯಾಟ: ಅನೀಶ್‌ ನಟನೆಯ ಹೈವೋಲ್ಟೇಜ್‌ ಸಿನಿಮಾ

05:40 PM Jul 15, 2022 | Team Udayavani |

ಅನೀಶ್‌ ತೇಜೇಶ್ವರ್‌- ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಜೊತೆಗೆ ಹೊಸ ಪ್ರಯೋಗದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನೀಶ್‌ ಈಗ “ಬೆಂಕಿ’ ಮೇಲೆ ವಿಶ್ವಾಸವಿಟ್ಟಿದ್ದಾರೆ. ನಾವು ಹೇಳುತ್ತಿರುವುದು ಅನೀಶ್‌ ನಟನೆ, ನಿರ್ಮಾಣದ ಹೊಸ ಸಿನಿಮಾದ ಬಗ್ಗೆ.

Advertisement

“ಬೆಂಕಿ’- ಇದು ಅನೀಶ್‌ ನಟನೆಯ ಹೊಸ ಸಿನಿಮಾ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಸೆಂಟಿಮೆಂಟ್‌ ಜೊತೆಗೆ ಆ್ಯಕ್ಷನ್‌ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಮೇಲೆ ಚಿತ್ರತಂಡ ಸಾಕಷ್ಟು ವಿಶ್ವಾಸವಿರಿಸಿದೆ. ಹಳ್ಳಿ ಬ್ರ್ಯಾಕ್‌ ಡ್ರಾಪ್‌ ನಲ್ಲಿ ತಯಾರಾಗಿರುವ ಪಕ್ಕ ಮಾಸ್‌ ಹಾಗೂ ಕಮರ್ಷಿಯಲ್‌ ಸಿನಿಮಾವಾಗಿದೆ.

ಚಿತ್ರದ ಬಗ್ಗೆ ಮಾತನಾಡುವ ನಾಯಕ ಅನೀಶ್‌, “ಬೆಂಕಿ ನನಗೆ ದೊಡ್ಡ ಚಾಲೆಂಜ್‌. ನನ್ನದೇ ಪ್ರೊಡಕ್ಷನ್‌ ಹೌಸ್‌ನ ಮೂರನೇ ಸಿನಿಮಾ. ನನ್ನ ಸ್ನೇಹಿತರ ಸಹಕಾರದಿಂದ ಈ ಸಿನಿಮಾ ಮಾಡಿದ್ದೇನೆ. ಇವರಿಲ್ಲದೇ ಸಿನಿಮಾ ಮಾಡೋದಿಕ್ಕೆ ಆಗಲಿಲ್ಲ. ಸಿನಿಮಾ ಮೇಲೆ ನನಗೆ ಪ್ರೀತಿ ಜಾಸ್ತಿ ಇದೆ. ನನಗೆ ಆಫ‌ರ್‌ ಬರುವುದು ನಿಂತಿಲ್ಲ. ಆದರೆ, ನನಗೆ ಇಷ್ಟವಾದ ಕಂಟೆಂಟ್‌ ಬೇಕು. ಪ್ರತಿಯೊಂದು ವಿಭಾಗ ನನ್ನ ಜೊತೆ ಕೈ ಜೋಡಿಸಿದೆ. ಬೆಂಕಿ ನನಗೆ ಬಹಳ ಆಪ್ತವಾದ ಸಿನಿಮಾ. ಆ್ಯಕ್ಟಿಂಗ್‌ ಮಾಡೋದಕ್ಕಿಂತ ಪ್ರೋಡಕ್ಷನ್‌ ಮಾಡೋದು ನನಗೆ ಸವಾಲು ಆಗಿತ್ತು. ಅಣ್ಣ-ತಂಗಿ ಸೆಂಟಿಮೆಂಟ್‌ ಇರುವ ಸಿನಿಮಾ ಇದು. ಅಣ್ಣ-ತಂಗಿ ಸೆಂಟಿಮೆಂಟ್‌ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎನ್ನುತ್ತಾರೆ ಅನೀಶ್‌.

ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆಯಾದ್ದರಿಂದ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದು ಹೋಗುತ್ತವೆ. ಹಾಗಾಗಿ, “ಬೆಂಕಿ’ ತಾರಾಗಣ ಕೂಡಾ ಅದ್ಧೂರಿಯಾಗಿದೆ. ಅನೀಶ್‌ಗೆ ನಾಯಕಿಯಾಗಿ “ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಹುಲಿವಾನ ನಟಿಸಿದ್ದು, ಶ್ರುತಿ ಪಾಟೀಲ್‌, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next