Advertisement

Bengaluru: ಮಹಿಳೆ ನಿದ್ದೆಗೆ ಜಾರಿದಾಗ ಸರ ಕದ್ದ!

03:37 PM Aug 10, 2024 | Team Udayavani |

ಬೆಂಗಳೂರು: ಮಹಿಳೆಯೊಬ್ಬರು ಮನೆ ಬಾಗಿಲಿನ ಬೀಗ ಹಾಕಿರುವುದನ್ನೇ ಮರೆತು ಚಿನ್ನದ ತಾಳಿ ಸರ ಬಿಚ್ಚಿಟ್ಟು ನಿದ್ದೆಗೆ ಜಾರಿದ್ದ ವೇಳೆ ಮನೆಗೆ ನುಗ್ಗಿ ಸರ ಕದ್ದ ಕಳ್ಳನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಇಮ್ರಾನ್‌ (27) ಬಂಧಿತ ಆರೋಪಿ.

ಈತನಿಂದ 50 ಗ್ರಾಂ ಆಭರಣ ವಶಕ್ಕೆ ಪಡೆಯ ಲಾಗಿದೆ. ಬಾಣಸವಾಡಿ ಠಾಣಾ ವ್ಯಾಪ್ತಿಯ ಲಿಂಗರಾಜ ಪುರ ದಲ್ಲಿ ಮಹಿಳೆಯೊಬ್ಬರು ರಾತ್ರಿ ವೇಳೆ ಮನೆ ಬಾಗಿಲಿನ ಬೀಗ ಹಾಕಿರುವುದನ್ನೇ ಮರೆತು ಚಿನ್ನದ ತಾಳಿ ಸರ ಬಿಚ್ಚಿಟ್ಟು ನಿದ್ದೆಗೆ ಜಾರಿದ್ದರು.

ಇದನ್ನು ಗಮನಿಸಿದ್ದ ಆರೋಪಿ ಇಮ್ರಾನ್‌ ಮನೆಯೊಳಗೆ ನುಗ್ಗಿ ಚಿನ್ನದ ತಾಳಿ ಕದ್ದು ಪರಾರಿ ಯಾಗಿದ್ದ. ಮರುದಿನ ಮಹಿಳೆ ಎದ್ದು ನೋಡಿದಾಗ ತಾಳಿ ಕಳ್ಳತನವಾಗಿರುವುದು ಕಂಡು ಬಂದಿತ್ತು.

ಕೂಡಲೇ ಬಾಣಸವಾಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next