Advertisement

Bengaluru: ಮನೆ ಬಾಗಿಲು ಮುರಿದು 21 ಲಕ್ಷ ರೂ. ಚಿನ್ನ ಕದ್ದವ ಸೆರೆ

02:45 PM Aug 24, 2024 | Team Udayavani |

ಬೆಂಗಳೂರು: ಕೆಲಸದ ನಿಮಿತ್ತ ಕುಟುಂಬ ಸಮೇತ ಮಡಿಕೇರಿಗೆ ಹೋಗಿದ್ದಾಗ ಮನೆಗೆ ಕನ್ನ ಹಾಕಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 67 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಎಚ್‌ .ಬಿ.ಸಮಾಜ ರಸ್ತೆಯ ಶ್ಯಾಮ್‌ ಪ್ರಿಯ ರೆಸಿಡೆನ್ಸಿ ನಿವಾಸಿ ಮಡಿಕೇರಿಗೆ ಹೋಗಿದ್ದಾಗ ಅವರ ಮನೆ ಬಾಗಿಲು ಮುರಿದು ಕಳ್ಳತನವಾಗಿದ್ದ ಬಗ್ಗೆ ನೆರೆಮನೆಯವರು ಕರೆ ಮಾಡಿ ತಿಳಿಸಿದ್ದಾರೆ.

ಕೂಡಲೇ ಕುಟುಂಬದವರು ಬಂದು ನೋಡಿದಾಗ ಬೀರುವಿನಲ್ಲಿದ್ದ ಚಿನ್ನದ ಬಳೆಗಳು, ಕಿವಿಯೋಲೆಗಳು ಸೇರಿದಂತೆ ಒಟ್ಟು 21.66 ಲಕ್ಷ ರೂ. ಮೌಲ್ಯದ 361 ಗ್ರಾಂ ಚಿನ್ನಾಭರಣ ಕಳವು ಆಗಿರುವುದು ಕಂಡು ಬಂದಿತ್ತು. ಮನೆ ಮಾಲೀಕರು ಈ ಬಗ್ಗೆ ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವಾರು ಕೃತ್ಯ ನಡೆದ ಮನೆಯ ಸಮೀಪದಲ್ಲಿದ್ದ ಹಲವಾರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next