Advertisement

ರಾಜ್ಯದಲ್ಲಿ ಅಕ್ಟೋಬರ್ 21 ರಿಂದ ಭಾರೀ ಮಳೆ?

01:00 AM Oct 19, 2021 | Team Udayavani |

ಬೆಂಗಳೂರು/ತಿರುವನಂತಪುರ: ದೇಶದ ವಿವಿಧೆಡೆ ಮಳೆಯ ಅಬ್ಬರ ಹೆಚ್ಚಾಗಿದ್ದು, ಕೇರಳದಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿದೆ. ಭೂಕುಸಿತವಾಗಿರುವ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.

Advertisement

ಅ. 21ರಿಂದ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅ. 20ರ ವರೆಗೆ ಲಘು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳೂ ಇವೆ.

ಶಬರಿಮಲೆ ಪ್ರವೇಶಕ್ಕೆ ಒತ್ತಾಯ
ಕೇರಳದಲ್ಲಿ ಭಾರೀ ಮಳೆಯಿಂದಾಗಿ ಶಬರಿಮಲೆ ದೇಗುಲಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈಗಾಗಲೇ ಹೊರಟು ನೀಲಕ್ಕಲ್‌ಗೆ ತೆರಳಿರುವ ಭಕ್ತರು ಕೇರಳ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಪಾ ನದಿ ಉಕ್ಕಿ ಹರಿಯುತ್ತಿದ್ದು, ಹೀಗಾಗಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದ್ದೇವೆ ಎಂದು ಸರಕಾರ ಹೇಳಿದೆ.

ಇದನ್ನೂ ಓದಿ:4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ

ಎಲ್ಲೋ ಅಲರ್ಟ್‌ ಮುಂದುವರಿಕೆ
ಅ. 20ರ ವರೆಗೆ ಕೇರಳದ ಹಲವಾರು ಭಾಗಗಳಿಗೆ ಎಲ್ಲೋ ಅಲರ್ಟ್‌ ಮುಂದುವರಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟುಗಳಲ್ಲಿ ಅಧಿಕ ನೀರು ಸಂಗ್ರಹವಾಗುತ್ತಿದೆ. ಹಲವು ಅಣೆಕಟ್ಟುಗಳು ಮತ್ತು ಕೆಳಭಾಗಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮಂಗಳವಾರ ಇಡುಕ್ಕಿ ಡ್ಯಾಂನ ಎರಡು ಗೇಟ್‌ ತೆರೆಯಲಾಗುವುದು ಎಂದು ಸರಕಾರ ಹೇಳಿದೆ. ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿದೆ. ಭೂಕುಸಿತಗಳಿಂದಾಗಿ 22 ಮಂದಿ ಸಾವನ್ನಪ್ಪಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next