Advertisement

ಬೆಂಗಳೂರು –ಕಣ್ಣೂರು ರೈಲು ಕಲ್ಲಿಕೋಟೆಗೆ ವಿಸ್ತರಣೆ: ವಿರೋಧ

12:57 AM Jul 27, 2022 | Team Udayavani |

ಮಂಗಳೂರು: ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ (ನಂ. 16511) ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.

Advertisement

ಇತ್ತೀಚೆಗಿನ ಐಆರ್‌ಟಿಟಿಸಿ ಸಭೆ ಯಲ್ಲಿ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಕಲ್ಲಿಕೋಟೆಗೆ ವಿಸ್ತ ರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿ ಸಲಾಗಿದೆ. ಮಂಗಳೂರು ಭಾಗದ ಜನರಿಗೆ ಇದು ಉಪ ಯುಕ್ತ ರೈಲು ಆಗಿದೆ. ಪ್ರಬಲ ಆಗ್ರಹದ ಬಳಿಕ 2007ರಲ್ಲಿ ಬೆಂಗಳೂರು- ಮಂಗಳೂರು ರೈಲು ಆಗಿ ಇದು ಆರಂಭಗೊಂಡಿತ್ತು. ವರ್ಷದ ಬಳಿಕ ವಿರೋಧ ವಿದ್ದರೂ ಕಣ್ಣೂರಿಗೆ ವಿಸ್ತರಿ ಸಲಾಗಿತ್ತು ಎಂದು ಸಮಿತಿ ತಿಳಿಸಿದೆ.

ಗರಿಷ್ಠ ಪ್ರಯಾಣಿಕರು ಮಂಗಳೂರಿಗೆ
ಈ ರೈಲಿನಲ್ಲಿ ಮಂಗಳೂರು ಭಾಗ ದಿಂದ ಬೆಂಗಳೂರು- ಮಂಗಳೂರು ನಡುವೆ ಗರಿಷ್ಠ ಸಂಖ್ಯೆಯ ಜನ ಪ್ರಯಾ ಣಿಸುತ್ತಿದ್ದಾರೆ. ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿ ಯಂತೆ 2021ರ ಎಪ್ರಿಲ್‌ ನಿಂದ 2022ರ ಮೇ 15ರ ವರೆಗೆ ದಿನ ವೊಂದಕ್ಕೆ ಬೆಂಗಳೂರು- ಮಂಗಳೂರು ಮಧ್ಯೆ ಸರಾಸರಿ 350 ಮಂದಿ ಪ್ರಯಾಣಿಸಿದ್ದರು. ಅದರೆ ಬೆಂಗಳೂರಿನಿಂದ ಕಣ್ಣೂರಿಗೆ ದಿನವೊಂದಕ್ಕೆ ಪ್ರಯಾಣಿಸಿರುವವರ ಸಂಖ್ಯೆ ಸರಾಸರಿ 50 ಮಂದಿ ಮಾತ್ರ. ಪ್ರಸ್ತುತ ಯಶವಂತಪುರದಿಂದ ಕಣ್ಣೂರಿಗೆ ಪಾಲಕ್ಕಾಡ್‌ ಮೂಲಕ ನೇರ ರೈಲು (16527/28) ಸಂಚರಿಸುತ್ತಿದೆ ಎಂದು ಸಮಿತಿ ರೈಲ್ವೇ ಮಂಡಳಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದೆ.

ಬೆಂಗಳೂರು-ಕಣ್ಣೂರು ಎಕ್ಸ್‌ ಪ್ರಸ್ಸನ್ನು ಕಣ್ಣೂರಿಗೆ ವಿಸ್ತರಿಸುವುದರಿಂದ ಪ್ರಸ್ತುತ ಇರುವ ಟಿಕೆಟ್‌ ಮುಂಗಡ ಕಾದಿರಿಸುವಿಕೆಯ ಮೇಲೂ ಪರಿಣಾಮ ಬೀರಲಿದ್ದು, ಮಂಗಳೂರು ಭಾಗದ ಜನರಿಗೆ ಲಭ್ಯ ಸೀಟುಗಳ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಲಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ರೈಲನ್ನು ಕಲ್ಲಿಕೋಟೆಗೆ ವಿಸ್ತರಿಸುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ಸಮಿತಿ ಆಗ್ರಹಿಸಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next