Advertisement

Bengaluru: ಟಿಪ್ಪರ್‌ ಲಾರಿ ಹರಿದು ಸೈಕಲ್‌ ಸವಾರ ಸ್ಥಳದಲ್ಲೇ ದುರ್ಮರಣ

10:45 AM Aug 30, 2024 | Team Udayavani |

ಬೆಂಗಳೂರು: ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೈಗ್ರೌಂಡ್ಸ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಒಡಿಶಾ ಮೂಲದ ಗೋಪಾಲ್‌ ದಲೈ (40) ಮೃತ ಸೈಕಲ್‌ ಸವಾರ. ಈ ಸಂಬಂಧ ಕೃತ್ಯ ಎಸಗಿದ ಟಿಪ್ಪರ್‌ ಲಾರಿ ಚಾಲಕ ಮಂಜೇ ಗೌಡ(38) ಎಂಬಾತನನ್ನು ಬಂಧಿಸಲಾಗಿದೆ.

ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಗೋಪಾಲ್‌, ಗಾಂಧಿ ನಗರದಲ್ಲಿರುವ ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದು, ಬುಧವಾರ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಬೆಳಗ್ಗೆ 7.45ರ ಸುಮಾರಿಗೆ ಸೈಕಲ್‌ನಲ್ಲಿ ಮತ್ತೂಂದು ಕಂಪನಿಯಲ್ಲಿ ಬೆಳಗ್ಗಿನ ಪಾಳಿ ಕೆಲಸಕ್ಕೆ ಚಾಲುಕ್ಯ ವೃತ್ತ ಮಾರ್ಗವಾಗಿ ಹೋಗುತ್ತಿದ್ದರು.

ಇದೇ ವೇಳೆ ಟಿಪ್ಪರ್‌ ಲಾರಿ ಚಾಲಕ ಟ್ರಿಲೈಟ್‌ ಜಂಕ್ಷನ್‌ ಕಡೆಯಿಂದ ಬಸವೇಶ್ವರ ಜಂಕ್ಷನ್‌ ಕಡೆ ಅತೀ ವೇಗವಾಗಿ ಬಂದು ಫೇರ್‌ ಫೀಲ್ಡ್‌ ಲೇಔಟ್‌ ಜಂಕ್ಷನ್‌ ಹತ್ತಿರ ಗೋಪಾಲ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಗೋಪಾಲ್‌ ಮೇಲೆ ಲಾರಿಯ ಚಕ್ರಗಳು ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.

Advertisement

ಘಟನೆ ಸಂಬಂಧ ಹೈಗ್ರೌಂಡ್ಸ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next