Advertisement

ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ

09:50 PM May 20, 2022 | Team Udayavani |

ಬೆಂಗಳೂರು: ಸಹೋದರಿಗೆ ವಿಚ್ಚೇಧನ ನೀಡಿದ ಭಾವನನ್ನು ಜೈಲಿಗೆ ಕಳುಹಿಸಲು ಭಾಮೈದುನೊಬ್ಬ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ, ಟೈಂಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಹಾಕಿದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

Advertisement

ವಿಲ್ಸನ್‌ಗಾರ್ಡ್‌ ನಿವಾಸಿ ಸುಭಾಷಿಸ್‌ ಕುಮಾರ್‌ ಗುಪ್ತಾ(35) ಬಂಧಿತ. ಆರೋಪಿ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದು, ಈ ಹಿಂದೆ ಏರ್‌ಪೋರ್ಟ್‌ನ ಕಾರ್ಗೋ ಕೊರಿಯರ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಕೆಲಸ ಬಿಟ್ಟಿದ್ದಾನೆ.

ಪಿಜಿಯಲ್ಲಿ ವಾಸವಾಗಿದ್ದ ಅರೋಪಿ ಮುಂಜಾನೆ 3.30ರ ಸುಮಾರಿಗೆ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಂ ಬಾಂಬ್‌ ಇಟ್ಟಿದ್ದು, ಅರ್ಧಗಂಟೆಯಲ್ಲಿ ಸ್ಫೋಟಗೊಳ್ಳುತ್ತದೆ ಎಂದಿದ್ದಾನೆ. ಅಲ್ಲದೆ, ಈ ಬಾಂಬ್‌ ಇಟ್ಟಿರುವುದು ದೀಪಕ್‌ ಸೋಲಾರ್‌ ಎಂಬಾತ ಎಂದು ಉಲ್ಲೇಖೀಸಿದ್ದಾನೆ. ಅದರಿಂದ ಗಾಬರಿಗೊಂಡ ಸಹಾಯವಾಣಿ ಸಿಬ್ಬಂದಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು, ವಿಮಾನ ನಿಲ್ದಾಣ ಪೊಲೀಸರಿಗೆ ರವಾನಿಸಿದ್ದಾನೆ. ನಂತರ ಇಡೀ ವಿಮಾನ ನಿಲ್ದಾಣವನ್ನು ಶ್ವಾನದಳ, ಬಾಂಬ್‌ ನಿಷ್ಟ್ರೀಯ ದಳ, ಪೊಲೀಸರು ಹಾಗೂ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ, ಸಿಐಎಸ್‌ಎಪ್‌ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾಗ ಬಾಂಬ್‌ ಪತ್ತೆಯಾಗಿಲ್ಲ. ನಂತರ ಇದು ಹುಸಿಕರೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ : ಸಾಲ ತೀರಿಸಲು ತನ್ನ ಸಹೋದರಿಯ ಮನೆಯಲ್ಲೇ ಬರೋಬ್ಬರಿ 31 ಲಕ್ಷದ ಚಿನ್ನಾಭರಣ ಕದ್ದ ಸಹೋದರ

ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಸಿಡಿಆರ್‌ ಆಧರಿಸಿ ಬಂಧಿಸಲಾಗಿದೆ. ವಿಚಾರಣೆ ವೇಳೆ ದೀಪಕ್‌ ಸೋಲಾರ್‌ ತನ್ನ ಅಕ್ಕನನ್ನು ಮದುವೆಯಾಗಿದ್ದು, ಇದೀಗ ಕೌಟುಂಬಿಕ ವಿಚಾರಕ್ಕೆ ವಿಚ್ಛೇಧನ ನೀಡಿದ್ದಾನೆ. ಹೀಗಾಗಿ ಆತನನ್ನು ಜೈಲಿಗೆ ಕಳುಹಿಸಲು ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next