Advertisement

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

08:28 PM Dec 06, 2021 | Team Udayavani |

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ವೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದೇವರಜೀವನಹಳ್ಳಿ ಮತ್ತು ಶಿವಾಜಿನಗರ ನಿವಾಸಿಗಳಾದ ಸೈಯದ್‌ ಮೊಯಿನುದ್ದಿನ್‌(21), ಅರ್ಬಾಜ್‌(24), ಅದ್ನಾನ್‌(23) ಹಾಗೂ ಅಫ‌ìತ್‌(21) ಬಂಧಿತರು.

ಆರೋಪಿಗಳು ನ.28ರಂದು ಶಿವಾಜಿನಗರದ ರೌಡಿಶೀಟರ್‌ ಮನ್ಸೂರ್‌ ಅಲಿಯಾಸ್‌ ದೂನ್‌ಗೆ ಪತ್ನಿ ಎದುರೇ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈಯಲು ಯತ್ನಿಸಿದ್ದರು. ಸದ್ಯ ಮನ್ಸೂರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆಗೊಳಗಾಗಿರುವ ರೌಡಿಶೀಟರ್‌ ಮನ್ಸೂರ್‌ ವಿರುದ್ಧ ಶಿವಾಜಿನಗರ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ಮನ್ಸೂರ್‌ ರಂಜಾನ್‌ ಸಂದರ್ಭದಲ್ಲಿ ಸೈಯದ್‌ ಮೊಯಿನುದ್ದೀನ್‌ ಹಾಗೂ ಅಫ‌ìತ್‌ಗೆ ಹಲ್ಲೆ ನಡೆಸಿದ್ದ. ಅನಂತರ ಸೈಯದ್‌ ಹಾಗೂ ಇತರೆ ಆರೋಪಿಗಳು ಮನ್ಸೂರ್‌ ಮೇಲೆ ಹಲ್ಲೆ ಸಂಚು ರೂಪಿಸಿದ್ದರು. ಅಷ್ಟರಲ್ಲಿ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಮನ್ಸೂರ್‌ ಜೈಲು ಸೇರಿದ್ದ. ಹೀಗಾಗಿ ಸಂಚು ವಿಫ‌ಲಗೊಂಡಿತ್ತು.

ಇದನ್ನೂ ಓದಿ : ಬಿಳಿಗಿರಿರಂಗನಾಥ ಅರಣ್ಯದಲ್ಲಿ ನೀಲ ಕುರಂಜಿ ಹೂವುಗಳ ಸೊಬಗು

Advertisement

ಈ ಮಧ್ಯೆನ.25ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಮನ್ಸೂರ್‌ ನ.27ರಂದು ಸೈಯದ್‌ ಮೊಹಿನುದ್ದೀನ್‌ ಕೆಲಸ ಮಾಡುವ ಗ್ಯಾರೆಜ್‌ಗೆ ಬೈಕ್‌ ರಿಪೇರಿಗೆ ಬಿಟ್ಟಿದ್ದ. ಈ ವೇಳೆ ಮನ್ಸೂರ್‌ನನ್ನು ಗುರುತಿಸಿದ ಸೈಯದ್‌, ತನ್ನ ಇತರೆ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಆದರೆ, ಮನ್ಸೂರ್‌ ಸೈಯದ್‌ನನ್ನು ಗುರುತಿಸಿರಲಿಲ್ಲ. ನ.28ರಂದು ಗ್ಯಾರೆಜ್‌ನಿಂದ ಬೈಕ್‌ ಬಿಡಿಸಿಕೊಂಡು ಪತ್ನಿ ಜತೆ ಹೋಗುತ್ತಿದ್ದ ಮನ್ಸೂರ್‌ ಮೇಲೆ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದರು. ಆಗ ಪತ್ನಿ ಸಹಾಯಕ್ಕೆ ಬಂದರೂ ಆಕೆಗೆ ಬೆದರಿಸಿ ಮನ್ಸೂರ್‌ಗೆ ಮನಸೋಇಚ್ಚೆ ಹಲ್ಲೆ ನಡೆಸಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮನ್ಸೂರ್‌ನನ್ನು ಆರೋಪಿಗಳು ಬಿಟ್ಟು ಪರಾರಿಯಾಗಿದ್ದರು. ಬಳಿಕ ಪತ್ನಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next