Advertisement

ಮದ್ಯದ ಅಮಲಿನಲ್ಲಿ ಪಟಾಕಿ ಮಳಿಗೆ ಮಾಲೀಕರ ಮೇಲೆ ಹಲ್ಲೆ : ಆರು ಮಂದಿ ಬಂಧನ

07:32 PM Nov 11, 2021 | Team Udayavani |

ಬೆಂಗಳೂರು : ಮದ್ಯದ ಅಮಲಿನಲ್ಲಿ ಪಟಾಕಿ ಮಳಿಗೆಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರು ಮಂದಿ ಕೆಂಪೇಗೌಡನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ವಿಕ್ರಂ, ವೀರಮಣಿ,ಅಜಿತ, ವಿಜಯ್‌, ಅಪ್ಪು ಎಂಬವರನ್ನು ಬಂಧಿಸಲಾಗಿದೆ. ಪಟಾಕಿ ಅಂಗಡಿ ಮಾಲೀಕ ಮಧು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಲಾಗಿದೆ ಎಂದು ಪೊಲೀಸರು ಹೇಳಿದರು.

ನ.3ರಂದು ದೀಪಾವಳಿ ಹಬ್ಬದಂದು ರಾತ್ರಿ ಬಸವನಗುಡಿಯ ಬುಲ್‌ ಟೆಂಪಲ್‌ ರಸ್ತೆಯಲ್ಲಿರುವ ಉದಯಭಾನು ಮೈದಾನದಲ್ಲಿ ಪಟಾಕಿ ಅಂಗಡಿಗೆ ಕುಡಿದ ಮತ್ತಿನಲ್ಲಿ ಬಂದ ಆರೇಳು ಮಂದಿ ದಾಂಧಲೆ ನಡೆಸಿದ್ದರು. ಉಚಿತವಾಗಿ ಪಟಾಕಿ ಕೊಡುವಂತೆ ಧಮ್ಕಿ ಹಾಕಿದ್ದರು. ಆದರೆ, ಪಟಾಕಿ ಕೊಡಲು ಅಂಗಡಿ ಮಾಲೀಕ ಮಧು ನಿರಾಕರಿಸಿದ್ದರು. ಅದರಿಂದ ಸಿಟ್ಟಾದ ಆರೋಪಿಗಳು ಪಟಾಕಿ ಅಂಗಡಿ ಮಾಲೀಕ ಮಧು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್‌ನಿಂದ ಹೊಡೆಯಲು ಯತ್ನಿಸಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದಾಗ ಅಂಗಡಿ ಮಾಲೀಕನ ಕೈ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಗಲಾಟೆ ಜೋರಾಗುತ್ತಿದ್ದಂತೆ ಸ್ಥಳೀಯರು ಆರೋಪಿಗಳನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ, ಗೌತಮ್‌ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜನರಿಂದ ಹಿಗ್ಗಾಮುಗ್ಗ ಥಳಿಸಿಕೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೇ ಆರೋಪಿ ಗೌತಮ್‌ ಸಹ ಸ್ಥಳೀಯರ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಗೋರಖ್‌ಪುರ 63 ಶಿಶುಗಳ ಸಾವಿನ ದುರಂತ : ಡಾ. ಕಫೀಲ್‌ ಖಾನ್‌ ವಜಾ

Advertisement
Advertisement

Udayavani is now on Telegram. Click here to join our channel and stay updated with the latest news.

Next