Advertisement

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

12:58 PM Jul 05, 2024 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ನಡೆದಿದ್ದ ಅಜಿತ್‌ ಎಂಬಾತನ ಕೊಲೆ ಪ್ರಕರಣ ಬೇಧಿಸಿರುವ ಪುಲಕೇಶಿನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Advertisement

ದೊಡ್ಡಗುಬ್ಬಿ ನಿವಾಸಿಗಳಾಗ ಕಿರಣ್‌ (32) ಮತ್ತು ರಾಹುಲ್‌(30) ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು, ಬೈಕ್‌ಗಳ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬುಧವಾರ ಬೆಳಗ್ಗೆ ಕಾಕ್‌ Õಟೌನ್‌ನ ದೊಡ್ಡ ಕುಂಟೆ ನಿವಾಸಿ ಅಜಿತ್‌(35) ಎಂಬಾತನನ್ನು ಭೀಕರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಹಳೇ ದ್ವೇಷಕ್ಕೆ ಕೊಲೆ: ಆರೋಪಿಗಳ ಪೈಕಿ ಕಿರಣ್‌ಗೆ 4 ವರ್ಷ ಗಳ ಹಿಂದೆ ಕೊಲೆಯಾದ ಅಜಿತ್‌ ತನ್ನ ಸಹಚರ ಜತೆ ಸೇರಿ ಕೊಂಡು ವೈಯಕ್ತಿಕ ವಿಚಾರಕ್ಕೆ ಹಲ್ಲೆ ನಡೆಸಿದ್ದ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಅಲ್ಲದೆ, ಆಗಾಗ್ಗೆ ದೊಡ್ಡಕುಂಟೆಯಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ಬರುತ್ತಿದ್ದ ಕಿರಣ್‌ಗೆ ಪದೇ ಪದೆ ಹಲ್ಲೆ ನಡೆಸುತ್ತಿದ್ದ. ಈ ಮಧ್ಯೆ ತಿಂಗಳ ಹಿಂದೆ ಹುಟ್ಟಹಬ್ಬ ಆಚರಿಸಿ ಕೊಳ್ಳಲು ಬಂದಿದ್ದ ಕಿರಣ್‌ಗೆ ಅಜಿತ್‌ ಹಲ್ಲೆ ನಡೆಸಿದ್ದ ಹಿನ್ನೆಲೆ ಯಲ್ಲಿ ಬುಧವಾರ ಅಜಿತ್‌ನ ಹತ್ಯೆಗೈದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next