Advertisement

ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!

05:08 PM May 22, 2022 | Team Udayavani |

ಬ್ರಹ್ಮಾವರ: ಬೆಂಗಳೂರಿನ ನವ ಜೋಡಿ ಮಂದಾರ್ತಿ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಒಳಗೆ ಪೆಟ್ರೋಲ್‌ ಅಥವಾ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಬೆಂಗಳೂರಿನ ಯಶವಂತ ಯಾದವ್‌(24) ಮತ್ತು ಜ್ಯೋತಿ(22) ಆತ್ಮಹತ್ಯೆ ಮಾಡಿಕೊಂಡವರು. ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಮೇ 19 ಮತ್ತು 20ರಂದು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪ್ರೀತಿಸಿ ಮದುವೆ
ಯಶವಂತ್‌ ಮತ್ತು ಜ್ಯೋತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಎರಡೂ ಕಡೆಯ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಮನೆಯವರನ್ನು ಬಿಟ್ಟು ಬದುಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಯಶವಂತ್‌ ತನ್ನ ತಮ್ಮನಿಗೆ ಮೆಸೇಜ್‌ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಡಿಗೆ ಕಾರು
ಶನಿವಾರ ಬೆಳಗ್ಗೆ ಮಂಗಳೂರಿನಲ್ಲಿ ಬಾಡಿಗೆ ಕಾರು ಪಡೆದು ಇಬ್ಬರೂ ಭಟ್ಕಳ ತನಕ ತೆರಳಿ ವಾಪಸಾಗಿದ್ದರು. ಶನಿವಾರ ಮಧ್ಯರಾತ್ರಿ ಮಂದಾರ್ತಿ ಸರ್ಕಲ್‌ ಮೂಲಕ ಹಾದು ಹೋಗಿದ್ದು ಕೊತ್ತೂರು ಒಳ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದ್ದಾರೆ. ಪೆಟ್ರೋಲ್‌ ಸುರಿದು ಬಾಗಿಲು ಲಾಕ್‌ ಮಾಡಿಕೊಂಡು ಬೆಂಕಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದೆ.

ಲುಕ್‌ಔಟ್‌ ನೊಟೀಸ್‌ ಜಾರಿಯಾಗಿತ್ತು

Advertisement

ಸ್ಥಳಕ್ಕೆ ಎಸ್‌ಪಿ, ಡಿವೈಎಸ್‌ಪಿ, ವೃತ್ತ ನಿರೀಕ್ಷಕರು, ಪೊಲೀಸ್‌ ಉಪನಿರೀಕ್ಷಕರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೋಡಿ ನಾಪತ್ತೆಯಾದ ಕುರಿತು ಹೆಬ್ಟಾಳ ಠಾಣೆಯಲ್ಲಿ ದೂರು ದಾಖಲಾದ ಮೇರೆಗೆ ಅವರ ಪತ್ತೆಗಾಗಿ ಪೊಲೀಸರು ಲುಕ್‌ಔಟ್‌ ನೊಟೀಸನ್ನು ಕೂಡ ಜಾರಿ ಮಾಡಿ ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು.

“ಮಮ್ಮಿ, ಡ್ಯಾಡಿ ಕ್ಷಮಿಸು’
ಜ್ಯೋತಿಯ ತಾಯಿ ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ನನ್ನ ಮಗಳು ಜ್ಯೋತಿ ಬಿಕಾಂ ಪದವೀಧರೆ. ಆತ ಯಾರೆಂದೇ ನನಗೆ ಗೊತ್ತಿಲ್ಲ. ನಾನು ಇವಾಗಲೇ ಆತನ ಮುಖ ನೋಡಿದ್ದು. ನನ್ನ ಒಬ್ಬಳೇ ಮಗಳನ್ನು ಕರೆದುಕೊಂಡು ಹೋಗಿ ಜೀವನವನ್ನೇ ಹಾಳು ಮಾಡಿದ. “ಮಮ್ಮಿ, ಡ್ಯಾಡಿ ನನ್ನನ್ನು ಕ್ಷಮಿಸು ಎಂದು ಮೆಸೇಜ್‌ ಕಳುಹಿಸಿ ಕೃತ್ಯವೆಸಗಿಕೊಂಡಿದ್ದಾಳೆ. ಮೇ 19ರಂದು ಕೆಲಸಕ್ಕೆ ಆಫ‌ರ್‌ ಬಂದಿದೆ. ಇಂಟರ್‌ವ್ಯೂ ಇದೆ ಎಂದು ಹೇಳಿ ಮನೆಯಿಂದ ಹೊರಹೋದವಳು ಮರಳಿ ಬಂದಿಲ್ಲ ಎಂದು ಹೇಳಿದ್ದಾರೆ. ಇತ್ತ ಯಶವಂತ್‌ ಟ್ಯಾಲಿ ಕ್ಲಾಸ್‌ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವನು ಮರಳಿ ಬಂದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next