Advertisement

Belthangady ಮುಳಿಕ್ಕಾರು: ಕಾಡಾನೆಯಿಂದ ಕೃಷಿ ನಾಶ

12:10 AM Jan 11, 2024 | Team Udayavani |

ಬೆಳ್ತಂಗಡಿ: ಕೆಲವು ದಿನಗಳಿಂದ ನಾಡಿಗೆ ಕಾಲಿರಿಸದೇ ಇದ್ದ ಒಂಟಿ ಸಲಗವು ಬುಧವಾರ ಮತ್ತೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರಿನಲ್ಲಿ ಕೃಷಿ ಭೂಮಿಗೆ ನುಗ್ಗಿ ಹಾನಿ ಉಂಟುಮಾಡಿದೆ.

Advertisement

ಬುಧವಾರ ಬೆಳಗ್ಗಿನ ಜಾವ ಡೀಕಯ್ಯ ಮಲೆಕುಡಿಯ ಅವರ ತೋಟಕ್ಕೆ ನುಗ್ಗಿದ ಆನೆ ಒಂದು ದೊಡ್ಡ ತೆಂಗಿನ ಮರವನ್ನು ನೆಲಕ್ಕುರುಳಿಸಿ ಪುಡಿಗೈದಿದೆ. ಇತರ ತೆಂಗಿನ ಮರ, ಅಡಿಕೆ, ಬಾಳೆ ಗಿಡಗಳಿಗೆ ಹಾನಿ ಉಂಟುಮಾಡಿದೆ. ಕಳೆದ ಕೆಲದಿನಗಳಿಂದ ಒಂಟಿ ಸಲಗ ಇದೇ ಪರಿಸರದ ಅರಣ್ಯದಲ್ಲಿ ತಿರುಗಾಟ ನಡೆಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.

ಆನೆ ಮುಳಿಕಾರಿನ ಅರಣ್ಯದಲ್ಲಿಯೇ ಇದ್ದು ರಾತ್ರಿ ಮತ್ತೆ ಕೃಷಿ ಭೂಮಿಗೆ ನುಗ್ಗುವ ಅಪಾಯವಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಆನೆಯನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನರು ಆಗ್ರಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next