Advertisement

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ; ವೈದ್ಯ ಸೇರಿ ಮೂವರಿಗೆ ಗಾಯ

05:33 PM Dec 05, 2022 | Team Udayavani |

ಬೆಳ್ತಂಗಡಿ: ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್‌ ಚಾಲಕನ ನಿಯಂತ್ರಣ ತಪ್ಪಿ ಬೆಳ್ತಂಗಡಿ ಸೋಮಾವತಿ ನದಿಯ ಸೇತುವೆಯಲ್ಲಿ ಪಲ್ಟಿಯಾದ ಘಟನೆ ರವಿವಾರ ರಾತ್ರಿ ನಡೆದಿದೆ.

Advertisement

ಆಂಬುಲೆನ್ಸ್‌ನಲ್ಲಿದ್ದ ಮೂವರ ಪೈಕಿ ವೈದ್ಯ ಡಾ| ನಿತಿನ್‌ ಅವರ ಕೈ ಮೂಳೆಗೆ ಗಂಭೀರ ಗಾಯವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯ ಸಿಬಂದಿ ವಾಹನ ಚಲಾಯಿಸುತ್ತಿ ಹುಝೈರ್‌ ಹಾಗೂ ರಿತೇಶ್‌ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಇವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವೈದ್ಯಕೀಯ ವಿಚಾರಕ್ಕಾಗಿ ಪಾರ್ಸೆಲ್‌ ತರಲು ಬೆಳ್ತಂಗಡಿಗೆ ಬಂದು ಹಿಂದುರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಕಾರಣಕ್ಕೆ ಬೊಲೆರೋ ಅಂಬುಲೆನ್ಸ್‌ ವಾಹನ ಬಹುತೇಕ ನುಜ್ಜುಗುಜ್ಜಾಗಿದೆ.

ಘಟನೆಯಿಂದ ಸುಮಾರು ಅರ್ಧ ತಾಸು ಟ್ರಾಫಿಕ್‌ ಜಾಮ್‌ ಉಂಟಾದ ಕಾರಣ, ಬೆಳ್ತಂಗಡಿ ಟ್ರಾಫಿಕ್‌ ಪೊಲೀಸರು, ಸಹಿತ ಜನರ ಸಹಕಾರದಿಂದ ಸಂಚಾರ ಸುಗಮಗೊಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next