Advertisement

Belthangady: ಮನೆ ಅಂಗಳದಲ್ಲೇ ವ್ಯಕ್ತಿಯ ಬರ್ಬರ ಕೊಲೆ

11:15 PM Aug 20, 2024 | Team Udayavani |

ಬೆಳ್ತಂಗಡಿ: ಮನೆ ಅಂಗಳದಲ್ಲಿಯೇ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ರುವ ಘಟನೆ ಬೆಳ್ತಂಗಡಿ ತಾ| ಬೆಳಾಲು ಗ್ರಾಮದ ಎಸ್‌.ಪಿ.ಬಿ. ಕಾಂಪೌಂಡಿನಲ್ಲಿ ನಡೆದಿದೆ.

Advertisement

ನಿವೃತ್ತ ಸರಕಾರಿ ಶಿಕ್ಷಕ ಎಸ್‌. ಪಿ. ಬಾಲಕೃಷ್ಣ ಭಟ್‌ (73) ಕೊಲೆಯಾದವರು.

ಇವರು ಕೊಲ್ಪಾಡಿ, ಕೊಯ್ಯೂರು ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮಂಗಳವಾರ ಮಧ್ಯಾಹ್ನದ ಬಳಿಕ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಕೊಲೆಗಾರರು ಯಾರು, ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೃತರ ಓರ್ವ ಪುತ್ರ ಬೆಂಗಳೂರಿ ನಲ್ಲಿದ್ದು, ಇನ್ನೋರ್ವ ಪುತ್ತೂರಿನಲ್ಲಿ ಕೆಲಸದಲ್ಲಿದ್ದ. ಪುತ್ರಿ ವಿವಾಹಿತೆ. ಪತ್ನಿ ಶಿಕ್ಷಕ್ಷಿಯಾಗಿದ್ದು 5 ವರ್ಷಗಳ ಹಿಂದೆ ಮೃತಪಟ್ಟಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next