Advertisement

Belthangady ಲಾರಿಯಡಿ ಸಿಲುಕಿ ಬೈಕ್‌ ಸವಾರ ಸಾವು

11:41 PM Jun 01, 2024 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರತ ಲಾರಿಯೊಂದು ಅದರ ಚಾಲಕನ ದುಡುಕುತನದ ಚಾಲನೆಯಿಂದಾಗಿ ಬೈಕ್‌ ಸಹಿತ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ. 1ರಂದು ಹಳೆಕೋಟೆ ಬಳಿ ನಡೆದಿದೆ.

Advertisement

ಮಚ್ಚಿನ ಗ್ರಾಮದ ಕೃಷಿಕ ವಿನೋದ್‌ ಗೌಡ (45) ಮೃತಪಟ್ಟವರು. ಲಾರಿ ಚಾಲಕ ಮಹಮದ್‌ ರಾಜಿಕ್‌ (30) ವಿರುದ್ಧ ದೂರು ದಾಖಲಿಸಲಾಗಿದೆ.

ಬೆಳ್ತಂಗಡಿ ಕಸಬಾ ಹಳೆಕೋಟೆ ಪೆಟ್ರೋಲ್‌ ಪಂಪ್‌ ಬಳಿ ಮಣ್ಣು ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ್ದರಿಂದ ಸವಾರ ಬೈಕ್‌ ಜತೆಗೆ ಲಾರಿಯ ಹಿಂಬದಿ ಟಯರ್‌ನಡಿಗೆ ಬಿದ್ದಿದ್ದಾರೆ.

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸವಾರನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next